Advertisement

Delhi; ಮಿತಿಮೀರಿದ ವಾಯುಮಾಲಿನ್ಯ:ದೀಪಾವಳಿ ಬಳಿಕ ಸಮ-ಬೆಸ ಯೋಜನೆ ಜಾರಿ

07:51 PM Nov 06, 2023 | Team Udayavani |

ಹೊಸದಿಲ್ಲಿ: ಅಪಾಯಕಾರಿ ಮಟ್ಟಕ್ಕೆ ತಲುಪಿರುವ ವಾಯು ಮಾಲಿನ್ಯವನ್ನು ಎದುರಿಸುವ ಕ್ರಮವಾಗಿ ರಾಷ್ಟ್ರ ರಾಜಧಾನಿಯಲ್ಲಿ ನವೆಂಬರ್ 13 ರಿಂದ 20 ರವರೆಗೆ ಸಮ-ಬೆಸ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ದೆಹಲಿ ಪರಿಸರ ಸಚಿವ ಗೋಪಾಲ್ ರಾಯ್ ಸೋಮವಾರ ಘೋಷಿಸಿದ್ದಾರೆ.

Advertisement

ಪತ್ರಿಕಾಗೋಷ್ಠಿಯಲ್ಲಿ “ಸಮ-ಬೆಸ ಯೋಜನೆಯು ದೀಪಾವಳಿಯ ನಂತರ ದೆಹಲಿಯಲ್ಲಿ ಜಾರಿಗೆ ಬರಲಿದೆ, ನವೆಂಬರ್ 13 ರಿಂದ ನವೆಂಬರ್ 20 ರವರೆಗೆ ನಡೆಯುತ್ತದೆ. ಯೋಜನೆಯನ್ನು ವಿಸ್ತರಿಸುವ ನಿರ್ಧಾರವನ್ನು ನವೆಂಬರ್ 20 ರ ನಂತರ ಮಾಡಲಾಗುವುದು” ಎಂದು ರಾಯ್ ತಿಳಿಸಿದರು.

ಸಮ-ಬೆಸ ಯೋಜನೆಯಡಿ ಕಾರುಗಳು ತಮ್ಮ ಬೆಸ ಅಥವಾ ಸಮ ಸಂಖ್ಯೆ ಫಲಕಗಳ ಆಧಾರದ ಮೇಲೆ ಪರ್ಯಾಯ ದಿನಗಳಲ್ಲಿ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗುತ್ತದೆ.

ಶಾಲಾ ಮಕ್ಕಳ ಆರೋಗ್ಯಕ್ಕೆ ಆದ್ಯತೆ ನೀಡಲು, ಬೋರ್ಡ್ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ 10 ಮತ್ತು 12ನೇ ತರಗತಿಗಳ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಎಲ್ಲಾ ಶಾಲೆಗಳಲ್ಲಿ ವೈಯಕ್ತಿಕ ತರಗತಿಗಳನ್ನು ಸ್ಥಗಿತಗೊಳಿಸಲು ಸರಕಾರ ನಿರ್ಧರಿಸಿದೆ ಎಂದು ರಾಯ್ ಹೇಳಿದರು.

ಸೋಮವಾರ ಬೆಳಗ್ಗೆ ದೆಹಲಿ-ಎನ್‌ಸಿಆರ್‌ನಲ್ಲಿ ಮಾಲಿನ್ಯದ ಮಟ್ಟವು ಸರಕಾರ ಸೂಚಿಸಿದ ಸುರಕ್ಷಿತ ಮಿತಿಗಿಂತ ಏಳರಿಂದ ಎಂಟು ಪಟ್ಟು ಹೆಚ್ಚು ದಾಖಲಾಗಿದೆ, ಏಕೆಂದರೆ ಈ ಪ್ರದೇಶದಲ್ಲಿ ವಿಷಕಾರಿ ಮಬ್ಬು ಸತತ ಏಳನೇ ದಿನವೂ ಮುಂದುವರಿದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next