Advertisement

ಕಳಚಿದ ಸಾರಸ್ವತ ಲೋಕ ಕೊಂಡಿ: ರೇವಣ್ಣ

06:38 PM May 04, 2020 | Suhan S |

ಮಾಗಡಿ: ಕನ್ನಡ ಸಾರತ್ವ ಲೋಕದ ಕೊಂಡಿಯೊಂದು ಕಳಚಿಕೊಂಡಿದ್ದು, ತುಂಬಲಾರದ ನಷ್ಟ ಉಂಟಾಗಿದೆ ಎಂದು ಎಂಎಲ್‌ಸಿ ಎಚ್ .ಎಂ. ರೇವಣ್ಣ ಗುಣಗಾನ ಮಾಡಿದರು.

Advertisement

ಪಟ್ಟಣದ ತೋಟದ ಮನೆಯಂಗಳದಲ್ಲಿ ನಿತ್ಯೋತ್ಸವ ಡಾ.ನಿಸಾರ್‌ ಅಹ್ಮದ್‌ ಅವರಿಗೆ ಶ್ರದ್ಧಾಂಜಲಿ ಕಾಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮೌನಾಚರಣೆ ನಡೆಸಿ ಮಾತನಾಡಿದರು. ಸಾಹಿತ್ಯ ಲೋಕಕ್ಕೆ ಡಾ.ನಿಸಾರ್‌ ಅಹ್ಮದ್‌ ಕೊಡುಗೆ ಅನನ್ಯವಾದುದು. ಅವರು ನನ್ನ ನೆಚ್ಚಿನ ಗುರುಗಳು. ನಾನು ಗ್ರಾಮೀಣ ಪ್ರದೇಶದಿಂದ ನಗರ ಪ್ರದೇಶಕ್ಕೆ ತೆರಳಿ ವಿಜ್ಞಾನ ಕಾಲೇಜಿಗೆ ಸೇರಿದ ಸಂದರ್ಭದಲ್ಲಿ ಡಾ.ನಿಸಾರ್‌ ಅಹ್ಮದ್‌ ಪ್ರೇರಣೆಯಿಂದ ಮೊಟ್ಟಮೊದಲು ಕನ್ನಡದಲ್ಲಿ ಭಾಷಣ ಮಾಡಿ ಮೆಚ್ಚುಗೆ ಪಡೆದುಕೊಂಡಿದ್ದೆ ಎಂದರು.

ಶಿಕ್ಷಣ ಇಲಾಖೆಯ ಸಹಾಯಕ ನಿರ್ದೇಶಕ ಮಂಜಪ್ಪ, ವಕೀಲ ರುದ್ರಾಚಾರ್‌, ಹಿರಿಯ ಚಿಕ್ಕ ಅರವಯ್ಯ, ಯುವ ಕಾಂಗ್ರೆಸ್‌ ಕಾರ್ಯದರ್ಶಿ ಶಶಾಂಕ್‌ ರೇವಣ್ಣ, ಎಲ್‌ಐಸಿ ಶಿವಕುಮಾರ್‌, ತೇಜಾ, ಶಂಕರ್‌, ಬಸವರಾಜು, ನಾಗರಾಜು, ಮೂರ್ತಿ,ಹೊಸಪೇಟೆ ಚಂದ್ರಯ್ಯ ಎಚ್‌.ಜೆ.ಪುರುಷೋತ್ತಮ್‌, ಮಂಜುನಾಥ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next