Advertisement

ಮುಕ್ರುಂಪಾಡಿ: 2 ಲಕ್ಷ ರೂ. ಮೌಲ್ಯದ ಅಡಿಕೆ ಕಳವು

07:19 PM Aug 04, 2022 | Team Udayavani |

ಪುತ್ತೂರು: ಗೋದಾಮಿನಲ್ಲಿದ್ದ ಅಡಿಕೆ ಚೀಲಗಳಿಂದ ಸುಮಾರು 2 ಲಕ್ಷ ರೂ. ಮೌಲ್ಯದ ಅಡಿಕೆ ಕಳವಾಗಿರುವ ಕುರಿತು ಪುತ್ತೂರು ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಮುಕ್ರಂಪಾಡಿ ಇಂಡಸ್ಟ್ರಿಯಲ್‌ ಏರಿಯಾದಲ್ಲಿರುವ ರಿದ್ದಿ ಸಿದ್ದಿ ಲಾಜಿಸ್ಟಿಕ್‌ ಸಂಸ್ಥೆ ಪುತ್ತೂರಿನ ವ್ಯಾಪಾರಿಗಳ ಅಡಿಕೆಯನ್ನು ಗುಜರಾತ್‌ಗೆ ಹಾಗೂ ಇತರ ಕಡೆಗಳಿಗೆ ಸಾಗಾಟ ಮಾಡುತ್ತಿದ್ದು, ಈ ಸಂಸ್ಥೆಯಲ್ಲಿ ಜು. 27 ಸಂಜೆಯಿಂದ ಮತ್ತು 28ರ ಬೆಳಗ್ಗಿನ ಅವಧಿಯಲ್ಲಿ ತಲಾ 65 ಕೆ.ಜಿ. ತೂಕದ 4 ಚೀಲ ಅಡಿಕೆ ಮತ್ತು ಜು. 30ರ ರಾತ್ರಿಯಿಂದ ಆ. 1ರ ಬೆಳಗಿನ ಅವಧಿಯಲ್ಲಿ ತಲಾ 65 ಕೆ.ಜಿ. ತೂಕದ 5 ಚೀಲ ಅಡಿಕೆ ಕಾಣೆಯಾಗಿದೆ.

ಈ ಕುರಿತು ಸಂಸ್ಥೆಯ ಮ್ಯಾನೇಜರ್‌ ಮಹೇಶ್‌ ಅವರು ಸಂಸ್ಥೆಯ ಮಾಲಕ ಧೀರನ್‌ ದಿಲೀಪ್‌ ಷಾ ಅವರಿಗೆ ತಿಳಿಸಿದ್ದಾರೆ. ಈ ಕುರಿತು ಧೀರನ್‌ ದಿಲೀಪ್‌ ಷಾ ಅವರು ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ ಇಲ್ಲಿ ಕಳವಾದ ಗೋದಾಮಿನ ಕಟ್ಟಡಕ್ಕೆ ಹಾನಿ ಆಗಿಲ್ಲ. ಕಟ್ಟಡದ ಶಟರ್‌ ಬೀಗವೂ ಒಡೆದಿಲ್ಲ. ಆದರೂ ಕಳವಾಗಿರುವ ಹಿನ್ನೆಲೆಯಲ್ಲಿ ಅನುಮಾನಗಳು ವ್ಯಕ್ತವಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next