Advertisement

ಮತ್ತೆ ಅನ್ಯಾಯ; ಹಾಲ್ ಟಿಕೆಟ್ ನೀಡದೆ ಕನ್ನಡ ಪರೀಕ್ಷೆ ನಡೆಸಿದ ಎನ್ ಟಿಎ

02:28 PM Oct 01, 2022 | Team Udayavani |

ಶಿವಮೊಗ್ಗ: ನ್ಯಾಷನಲ್ ಟೆಸ್ಟಿಂಗ್ ಎಜೆನ್ಸಿ (ಎನ್ ಟಿಎ) ಯಿಂದ ಮತ್ತೆ ರಾಜ್ಯದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದ್ದು, ವಿದ್ಯಾರ್ಥಿಗಳಿಗೆ ಹಾಲ್ ಟಿಕೆಟ್ ನೀಡದೆ ಇಂದು ಕನ್ನಡ ಪರೀಕ್ಷೆ ನಡೆಸಲಾಗಿದೆ.

Advertisement

ಜೆಆರ್ ಎಫ್ ಮತ್ತು ಅಸಿಸ್ಟೆಂಟ್ ಪ್ರೊಫೆಸರ್ ಗೆ ನೆಟ್ ಪರೀಕ್ಷೆ ನಡೆಯುತ್ತಿದ್ದು, ಅರ್ಧದಷ್ಟು ವಿದ್ಯಾರ್ಥಿಗಳಿಗೆ ಮಾತ್ರ ಹಾಲ್ ಟಿಕೆಟ್ ಬಿಡಲಾಗಿದೆ. ಪ್ರತಿ ವರ್ಷ ಎನ್ ಟಿಎ ನ್ಯಾಷನಲ್ ಎಲಿಜಿಬಲಿಟಿ ಟೆಸ್ಟ್ ನಡೆಸುತ್ತದೆ. ಎನ್ ಟಿಎ ಸ್ಥಳ, ದಿನಾಂಕ, ಸಮಯ ನಮೂದಿಸಿದ ಹಾಲ್ ಟಿಕೆಟ್ ಬಿಟ್ಟಿದೆ. ಕೊನೆಕ್ಷಣದಲ್ಲಿ ಹಾಲ್ ಟಿಕೆಟ್ ಕೊಟ್ಟು ಎಂಎ ಕನ್ನಡ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಲಾಗಿದೆ.

ನಿನ್ನೆ ತಡರಾತ್ರಿಯ ಬಳಿಕ ವೆಬ್ ಸೈಟ್ ನಲ್ಲಿ ಹಾಲ್ ಟಿಕೆಟ್ ನೀಡಿದ್ದು, ಹೀಗಾಗಿ ದೂರದ ಜಿಲ್ಲೆಗೆ ಹೋಗಲಾಗದೆ ಬಹುತೇಕ ವಿದ್ಯಾರ್ಥಿಗಳು ಪರೀಕ್ಷೆ ತ್ಯಜಿಸಿದ್ದಾರೆ. ತಾಂತ್ರಿಕ ಕಾರಣ, ಪರೀಕ್ಷಾ ಕೇಂದ್ರದ ಸಮಸ್ಯೆ ಹೇಳಿ ವಿದ್ಯಾರ್ಥಿಗಳಿಗೆ ಎನ್ ಟಿಎ ಗೊಂದಲ ಸೃಷ್ಟಿಸಿದೆ.

ಪ್ರತಿ ವರ್ಷ ‘ಕನ್ನಡ’ ವಿಷಯದ ಪರೀಕ್ಷೆಗೆ ಸಮಸ್ಯೆ ಮಾಡಲಾಗುತ್ತಿದೆ. ಒಂದೇ ಪರೀಕ್ಷೆಯನ್ನು ಎರಡೆರಡು ಹಂತದಲ್ಲಿ ಮಾಡುತ್ತಿದ್ದಾರೆ. ಬೇರೆ ಯಾವುದೇ ಭಾಷೆ ಪರೀಕ್ಷೆಗೆ ಇಲ್ಲದ ಸಮಸ್ಯೆ ಇಲ್ಲಿ ಕನ್ನಡಕ್ಕೆ ಮಾತ್ರ ಏಕೆ ಎಂದು ವಿದ್ಯಾರ್ಥಿಗಳು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ:ಸಿಎಂ ಆಗುವ ಆತುರದಲ್ಲಿಲ್ಲ; ಆರ್‌ಜೆಡಿ ನಾಯಕರಿಗೆ ಡಿಸಿಎಂ ತೇಜಸ್ವಿ ವಾರ್ನಿಂಗ್

Advertisement

ಈ ಹಿಂದೆ ವರ್ಷಕ್ಕೆ ಎರಡು ಬಾರಿ ನೀಟ್ ಪರೀಕ್ಷೆ ನಡೆಸಲಾಗುತ್ತಿತ್ತು. ಕಳೆದ ವರ್ಷದಿಂದ ವರ್ಷಕ್ಕೊಮ್ಮೆ ಮಾತ್ರ ಪರೀಕ್ಷೆ ನಡೆಸುತ್ತಿದೆ. ಒಂದೇ ಪರೀಕ್ಷೆಯಿಂದ ಮೀಸಲು ಪರ್ಸೆಂಟೇಜ್ ನಲ್ಲೂ ರಾಜ್ಯದ ಕನ್ನಡ ವಿದ್ಯಾರ್ಥಿಗಳಿಗೆ ಅನ್ಯಾಯ‌ವಾಗುತ್ತಿದೆ.

ಕಳೆದ ಬಾರಿ ಕೂಡ ಕನ್ನಡ ಪರೀಕ್ಷೆ ವೇಳೆ ಸಮಸ್ಯೆಯಾಗಿತ್ತು. ಕನ್ನಡದ ಪರೀಕ್ಷೆಗೆ ಹಿಂದಿ ಭಾಷೆಯಲ್ಲಿ ಪ್ರಶ್ನೆ ಪತ್ರಿಕೆ ಕೊಟ್ಟಿದ್ದ ಎನ್ ಟಿಎ, ವಿದ್ಯಾರ್ಥಿಗಳ ಪ್ರತಿಭಟನೆ ನಂತರ ಮರು ಪರೀಕ್ಷೆ ಮಾಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next