Advertisement

ರಾಹುಲ್‌ ಬಚ್ಚಾ; ಆತನಿಂದಾಗಿ ಬಿಜೆಪಿಗೆ 150 ಸ್ಥಾನ: ಬಿಎಸ್‌ವೈ

03:18 PM Feb 21, 2018 | Team Udayavani |

ಬೆಂಗಳೂರು : ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಓರ್ವ ಬಚ್ಚಾ; ಆತನನ್ನು ಕರ್ನಾಟಕಕ್ಕೆ ತರುವ ಮೂಲಕ ಬಿಜೆಪಿ 150ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಹೇಳಿದ್ದಾರೆ.

Advertisement

ಕೆಲ ದಿನಗಳ ಹಿಂದೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ “ರಾಹುಲ್‌ ಗಾಂಧಿ ವಿರೋಧ ಪಕ್ಷದ ನಾಯಕನಾಗುವ ಮೂಲಕ ಬಿಜೆಪಿಯ ಅದೃಷ್ಟ ಖುಲಾಯಿಸಿದೆ; ದೇಶವನ್ನು ಕಾಂಗ್ರೆಸ್‌ ಮುಕ್ತ ಗೊಳಿಸುವುದು ಸುಲಭವಾಗಿದೆ’ ಎಂದು ಹೇಳಿದ್ದರು. ಈಗ ಯಡಿಯೂರಪ್ಪ ಅವರು ರಾಹುಲ್‌ ಗಾಂಧಿಯನ್ನು “ಬಚ್ಚಾ’ ಎಂದು ಕರೆಯುವ ಮೂಲಕ ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವ ಮಾರ್ಗ ಸುಲಭವಾಗಿದೆ ಎಂದು ಹೇಳಿದ್ದಾರೆ. 

ಈ ತಿಂಗಳ ಆದಿಯಲ್ಲಿ ಯಡಿಯೂರಪ್ಪ ಅವರು ರಾಹುಲ್‌ ಗಾಂಧಿಯನ್ನು “ಚುನಾವಣೆಯ ಹಿಂದು’ ಎಂದು ಕರೆದಿದ್ದರು. ಚುನಾವಣೆಯ ಸಂದರ್ಭದಲ್ಲಿ ಮಾತ್ರ ಹಿಂದು ದೇವಳಗಳನ್ನು ಒಂದರ ಬಳಿಕ ಒಂದರಂತೆ ಭೇಟಿಯಾಗುವ ರಾಹುಲ್‌ ಗಾಂಧಿ “ಚುನವಾಣಾ ಹಿಂದು’ ಎನಿಸಿದ್ದಾರೆ. ರಾಹುಲ್‌ ರಾಜ್ಯದಲ್ಲಿ  ಚುನಾವಣಾ ಪ್ರಚಾರಕ್ಕೆ ಇಳಿಯುವ ಮೂಲಕ ಕರ್ನಾಟಕವನ್ನು ಕಾಂಗ್ರೆಸ್‌ ಮುಕ್ತಗೊಳಿಸುವ ಬಿಜೆಪಿ ಕನಸು ಸುಲಭದಲ್ಲಿ ನನಸಾಗಲಿದೆ ಎಂದು ಯಡಿಯೂರಪ್ಪ ಹೇಳಿದ್ದಾರೆ.  

Advertisement

Udayavani is now on Telegram. Click here to join our channel and stay updated with the latest news.

Next