Advertisement

“ಗಿಡಗಳನ್ನು ಮಕ್ಕಳಂತೆ ಪೋಷಿಸಿ ಸಮೃದ್ಧ ವನಸಿರಿ ಬೆಳೆಸಿ’

11:41 PM Nov 20, 2019 | Sriram |

ಕೋಟ: ಪರಿಸರದಲ್ಲಿ ದಿನದಿಂದ ದಿನಕ್ಕೆ ಮರಗಳ ಸಂಖ್ಯೆ ಕಡಿಮೆಯಾಗುತ್ತಿದ್ದು ಪ್ರಕೃತಿ ವಿಕೋಪಗಳು ಹೆಚ್ಚುತ್ತಿದೆ. ಆದ್ದರಿಂದ ಗಿಡಗಳನ್ನು ಮಕ್ಕಳಂತೆ ಫೋಷಣೆ ಮಾಡಿ ಉತ್ತಮ ವನಸಿರಿ ಬೆಳೆಸುವ ಅಗತ್ಯವಿದೆ ಎಂದು ಬ್ರಹ್ಮಾವರ ಉಪವಲಯಾರಣ್ಯಾಧಿಕಾರಿ ಜೀವನ ಶೆಟ್ಟಿ ಹೇಳಿದರು.

Advertisement

ಅವರು ನ.17ರಂದು ಸಾಲಿಗ್ರಾಮ ಚಿತ್ರಪಾಡಿ ಗಿರಿಫ್ರೆಂಡ್ಸ್‌ ಆಶ್ರಯದಲ್ಲಿ ಔಷಧೀಯ ವನ ಬೆಳೆಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಸಂಘ ಸಂಸ್ಥೆಗಳು ಮರಗಿಡಗಳನ್ನು ಬೆಳೆಸುವ ಕಾರ್ಯಕ್ರಮದಲ್ಲಿ ಅಗತ್ಯವಾಗಿ ಭಾಗವಹಿಸಬೇಕು. ಇಲಾಖೆ ಅವರಿಗೆ ಅಗತ್ಯ ನೆರವು ನೀಡುತ್ತದೆ ಹಾಗೂ ಗಿರಿಫ್ರೆಂಡ್ಸ್‌ನ ಈ ಕಾರ್ಯ ಇತರ ಸಂಘಟನೆಗಳಿಗೆ ಮಾದರಿ ಎಂದರು.

ಸಂಘದ ಅಧ್ಯಕ್ಷ ಸತೀಶ್‌ ಆಚಾರ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಸಂಸ್ಥೆಯ ವತಿಯಿಂದ ಜರಗಿದ ರಂಗೋಲಿ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಜರಗಿತು.ಉಪನ್ಯಾಸಕ ಲಕ್ಷ್ಮೀನಾರಾಯಣ ಕಾರಂತ, ಜಯಕರ್ನಾಟಕ ಸಾಲಿಗ್ರಾಮ ಘಟಕದ ಅಧ್ಯಕ್ಷ ನಾಗರಾಜ ಗಾಣಿಗ, ವಿಶ್ವನಾಥ ನಾವುಡ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.ಕಾರ್ಯದರ್ಶಿದಿನೇಶ್‌ ಸ್ವಾಗತಿಸಿ, ನಾಗೇಂದ್ರ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next