Advertisement

ಆಗ್ರಾ ಮಸೀದಿ: ಕೇಂದ್ರಕ್ಕೆ ನೋಟಿಸ್; ಪ್ರಾಚ್ಯವಸ್ತು ಇಲಾಖೆಗೂ ನೋಟಿಸ್‌ ಜಾರಿ

08:18 PM Jun 03, 2022 | Team Udayavani |

ಮಥುರಾ: ಶಾಹಿ ಈದ್ಗಾ ಮಸೀದಿ-ಶ್ರೀಕೃಷ್ಣ ಜನ್ಮಭೂಮಿ ವಿವಾದ ಹಿನ್ನೆಲೆಯಲ್ಲಿ ನ್ಯಾಯಾಲಯದ ಮೊರೆ ಹೋಗಿರುವ ಅರ್ಜಿದಾರರು, ಕೇಂದ್ರ ಸರ್ಕಾರ ಮತ್ತು ಭಾರತೀಯ ಪುರಾತತ್ವ ಇಲಾಖೆಗೆ ನೋಟಿಸ್‌ ನೀಡಿದ್ದಾರೆ.

Advertisement

ಶ್ರೀಕೃಷ್ಣ ಜನ್ಮಸ್ಥಾನದಲ್ಲಿನ ಕೇಶವ ದೇವ ಮಂದಿರದ ವಿಗ್ರಹಗಳನ್ನು ಆಗ್ರಾದ ಬೇಗಂ ಸಾಹಿಬಾ ಮಸೀದಿ ಮೆಟ್ಟಿಲುಗಳ ಕೆಳಗೆ ಹುಗಿಯಲಾಗಿದೆ. ಮೊಘಲ್‌ ಸುಲ್ತಾನ ಔರಂಗಜೇಬ 1670ರಲ್ಲಿ ದೇವಸ್ಥಾನವನ್ನು ನಾಶ ಮಾಡಿಸಿದಾಗ ಈ ಕೃತ್ಯವೆಸಗಿದ್ದಾನೆ.

ಮೆಟ್ಟಿಲುಗಳ ಕೆಳಗಿರುವ ಈ ವಿಗ್ರಹಗಳನ್ನು ಕೂಡಲೇ ಹೊರತೆಗೆದು, ಸುರಕ್ಷಿತ ಸ್ಥಳದಲ್ಲಿಡಬೇಕು. ಹಾಗೆಯೇ ಆ ಮೆಟ್ಟಿಲುಗಳ ಮೇಲೆ ಯಾರೂ ಓಡಾಡದಂತೆ ಆದೇಶಿಸಬೇಕು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ನಾಗರಿಕ ಪ್ರಕ್ರಿಯೆಗಳ ವಿಧಿ 80ರಡಿಯಲ್ಲಿ ಈ ನೋಟಿಸ್‌ ಕಳುಹಿಸಲಾಗಿದೆ. ಇದನ್ನು ನೆರವೇರಿಸಲು ಸಂಬಂಧಪಟ್ಟವರು ತಪ್ಪಿದರೆ, ಪರಿಸ್ಥಿತಿ ನಿಭಾಯಿಸಲು ಸಜ್ಜಾಗಿ ಎಂದು ಎಚ್ಚರಿಕೆ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next