Advertisement

ಗೊಬ್ಬರ ಮಾರಾಟಗಾರರಿಗೆ ನೋಟಿಸ್‌

10:22 AM May 20, 2020 | Suhan S |

ಬೆಳಗಾವಿ: ಇಲ್ಲಿನ ಎ.ಪಿ.ಎಂ.ಸಿ ಮಾರುಕಟ್ಟೆ ಪ್ರಾಂಗಣದಲ್ಲಿರುವ ರಸಗೊಬ್ಬರ ಮಿಶ್ರಣ ಘಟಕ ಮತ್ತು ರಸಗೊಬ್ಬರ ಮಾರಾಟ ಮಳಿಗೆಗಳಲ್ಲಿ ಪರಿಶೀಲನೆ ನಡೆಸಿದ ಕೃಷಿ ಇಲಾಖೆ ಅಧಿಕಾರಿಗಳ ತಂಡ, ರಸಗೊಬ್ಬರಗಳ ಗುಣಮಟ್ಟ ಮತ್ತು ಮಾರಾಟದ ವಿಷಯದಲ್ಲಿ ತನಿಖೆ ನಡೆಸಿ ತಪ್ಪೆಸಗಿದ ಮಾರಾಟಗಾರಿಗೆ ನೋಟಿಸ್‌ ನೀಡಿದೆ.

Advertisement

ವಿವಿಧ ಮಳಿಗೆಗಳಿಂದ ರಸಗೊಬ್ಬರ ಮಾದರಿಗಳನ್ನು ಸಂಗ್ರಹಿಸಿ ಗುಣಮಟ್ಟದ ಖಾತ್ರಿಗಾಗಿ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ದಾಖಲೆ ಸರಿ ಇಲ್ಲದ ರಸಗೊಬ್ಬರ ಮಿಶ್ರಣ ಘಟಕವೊಂದರ ಉತ್ಪನ್ನವನ್ನು ಮಾರಾಟ ಮಾಡದಂತೆ ತಾತ್ಕಾಲಿಕ ತಡೆ ನೋಟಿಸ್‌ ನೀಡಲಾಗಿದೆ. ಅಗತ್ಯ ದಾಖಲೆ ಇಲ್ಲದ ಐದು ಅಂಗಡಿಗಳಿಗೆ ಶೋಕಾಸ್‌ ನೋಟಿಸ್‌ ನೀಡಲಾಗಿದೆ ಎಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕ ಜಿ.ಬಿ.ಕಲ್ಯಾಣಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಂಟಿ ಕೃಷಿ ನಿರ್ದೇಶಕರ ಕಚೇರಿಯ ಜಾರಿ ದಳದ ಅಧಿಕಾರಿಗಳಾದ ಆರ್‌ ಬಿ.ಪಾಟೀಲ, ಆರ್‌.ಬಿ.ನಾಯ್ಕರ, ಸಿ.ಐ.ಹೂಗಾರ, ಮಂಗಳಾ ಬಿರಾದಾರ, ರಾಜಶೇಖರ ಭಟ್ಟ ಪರಿಶೀಲನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next