Advertisement

ನಮ್ಮ ಪ್ರತಿ ಹೆಜ್ಜೆಗೂ ಸಾಥ್ ನೀಡಿ, ವಿಶ್ವಾಸ ತುಂಬಿದ್ದೀರಿ: ಮೋದಿ@3

06:54 PM May 26, 2017 | Team Udayavani |

ಗುವಾಹಟಿ: ನಮಗೆ ದೇಶದ ಮೂಲೆ, ಮೂಲೆಯೂ ದೆಹಲಿಯೇ. ನೀವು ನಮಗೆ ಪೂರ್ಣ ಬಹುಮತದ ಸರ್ಕಾರ ನೀಡಿದ್ದೀರಿ. ನಾವು ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ನುಡಿದಂತೆ ನಡೆದಿದ್ದೇವೆ. ಆದರೆ ಹಿಂದಿನ ಸರ್ಕಾರಕ್ಕೆ ಅದು ಕೇಳಿಸುತ್ತಿರಲಿಲ್ಲ. 2022ರ ವೇಳೆಗೆ ದೇಶದ ರೈತರ ಆದಾಯ ದ್ವಿಗುಣಗೊಳಿಸುವ ಗುರಿ ಹೊಂದಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

Advertisement

ಕೇಂದ್ರ ಸರ್ಕಾರಕ್ಕೆ ಮೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ ಅಸ್ಸಾಂನಲ್ಲಿ ಬೃಹತ್ ಸಾರ್ವಜನಿಕ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು ಅಸ್ಸಾಮಿ ಭಾಷೆಯೊಂದಿಗೆ ಪ್ರಧಾನಿ ಮೋದಿ ಭಾಷಣ ಆರಂಭಿಸಿದ್ದರು. 

ಜನಸಾಮಾನ್ಯರ ಸಂಕಷ್ಟದ ಬಗ್ಗೆ ನನಗೆ ಸ್ವತಃ ಅನುಭವವಿದೆ. ನೋಟು ನಿಷೇಧ ಅತ್ಯಂತ ಕಠಿಣ ನಿರ್ಧಾರವಾಗಿತ್ತು. ಆದರೆ ರಾಜಕೀಯ ನಾಯಕರು ಆಕ್ರೋಶ ಹುಟ್ಟುಹಾಕಲು ಏನೆಲ್ಲಾ ಮಾಡಿದರು. ಎಂತಹ ಬಲಿಷ್ಠ ಸರ್ಕಾರವಾಗಿದ್ದರೂ ಭಸ್ಮವಾಗಿ ಹೋಗಬೇಕಿತ್ತು ಎಂದು ಹೇಳುವ ಮೂಲಕ ವಿಪಕ್ಷಗಳಿಗೆ ಟಾಂಗ್ ನೀಡಿದರು.

ನಾನು ಸಣ್ಣ ವ್ಯಕ್ತಿ ಹಾಗಾಗಿ ಸಣ್ಣ ಸಣ್ಣ ವ್ಯಕ್ತಿಗಳಿಗಾಗಿ ನಾನು ದೊಡ್ಡ ದೊಡ್ಡ ಕೆಲಸ ಮಾಡುತ್ತಿದ್ದೇನೆ. ಪ್ರತಿ ಸಮಯದಲ್ಲೂ ಭಾರತೀಯರು ನನಗಿಂತ ಒಂದು ಹೆಜ್ಜೆ ಮುಂದಿರುತ್ತಿದ್ದರು. ಆದರೆ ಕೋಟಿ ಕೋಟಿ ಸಂಕಷ್ಟಗಳ ನಡುವೆಯೂ ನೀವು ನನಗೆ ಹೆಗಲು ಕೊಟ್ಟಿದ್ದೀರಿ. ಇದೇ ನನಗೆ ಪ್ರೇರಣೆ. ಮನಸರ್ಪಿತ, ಧನಸರ್ಪಿತ ಇದಕ್ಕಿಂತ ನನಗೆ ಬೇರೇನು ಬೇಕಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next