Advertisement

ನೋಟ್‌ ಬ್ಯಾನ್‌ ಭ್ರಷ್ಟಾಚಾರ

06:54 AM Sep 18, 2018 | Team Udayavani |

ಭೋಪಾಲ್‌: ನಗದು ಅಪಮೌಲಿಕರಣ ಪ್ರಧಾನಿ ಮೋದಿ ಸರಕಾರದ ದೊಡ್ಡ ಹಗರಣವಾಗಿದ್ದು,ಆ ಮೂಲಕ ಬಂದ ಕೋಟ್ಯಂತರ ರೂ.  ದೇಶದ 15 ಅತಿ ಶ್ರೀಮಂತ ಉದ್ಯಮಿಗಳ ಜೇಬುಗಳಿಗೆ ತುಂಬಲಾಗಿದೆ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಆರೋಪಿಸಿದರು. ಇಲ್ಲಿನ ಬಿಎಚ್‌ಇಎಲ್‌ ದಸರಾ ಮೈದಾನದಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್‌ ಸಮಾವೇಶದಲ್ಲಿ ಮಾತನಾಡಿದ ಅವರು, “”ಉದ್ಯಮಿಗಳ 1.5 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಲಾಗಿದೆ. ಆದರೆ, ರೈತನ ಸಾಲ ಮನ್ನಾಕ್ಕೆ ಕೇಂದ್ರ ಸಿದ್ಧವಿಲ್ಲ” ಎಂದರು. 

Advertisement

ಸಮಾವೇಶಕ್ಕೂ ಮೊದಲು ರಾಹುಲ್‌, ಭೋಪಾಲ್‌ನಲ್ಲಿ 15 ಕಿ.ಮೀ.ಗಳ ರೋಡ್‌ ಶೋ ನಡೆಸಿದರು. ಮಾರ್ಗ ಮಧ್ಯೆ ಸರ್ದಾರ್‌ ಮಂಜಿಲ್‌ ಬಳಿ ಬಸ್‌ನಿಂದ ಇಳಿದು ಅಲ್ಲಿನ ಅಂಗಡಿಯೊಂದರಲ್ಲಿ ಸಮೋಸಾ, ಚಹಾ ಸೇವಿಸಿ ಅಂಗಡಿಯ ಸಿಬಂದಿ ಜತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next