Advertisement

ಕ್ರಿಕೆಟಿಗ ಮುರಳಿ ವಿಜಯ್‌ಗೆ ಕೊರೊನಾ ಲಸಿಕೆಯ ಭೀತಿ!

08:54 PM Nov 13, 2021 | Team Udayavani |

ಚೆನ್ನೈ: ಭಾರತ ಟೆಸ್ಟ್‌ ತಂಡದ ಮಾಜಿ ಆರಂಭಿಕ ಆಟಗಾರ ಮುರಳಿ ವಿಜಯ್‌ ವಿಶೇಷ ಕಾರಣಕ್ಕೆ ಚರ್ಚೆಗೆ ಗ್ರಾಸವಾಗಿದ್ದಾರೆ.

Advertisement

ಅವರಿನ್ನೂ ಕೊರೊನಾ ಲಸಿಕೆ ಹಾಕಿಸಿಕೊಂಡಿಲ್ಲ. ಕಾರಣ, ಹೆದರಿಕೆ! ಹೀಗಾಗಿ ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಕೂಟದಲ್ಲಿ ಸ್ಥಾನ ಪಡೆದಿಲ್ಲ ಎಂದು ತಿಳಿದು ಬಂದಿದೆ.

ಬಿಸಿಸಿಐ ನಿಯಮ ಪ್ರಕಾರ ದೇಶಿ ಕ್ರಿಕೆಟ್‌ನಲ್ಲಿ ಆಡುವವರು ಲಸಿಕೆ ಹಾಕಿಸಿಕೊಳ್ಳುವುದು ಕಡ್ಡಾಯ. ಆಗ ಮಾತ್ರ ಜೈವಿಕ ಸುರಕ್ಷಾ ವಲಯ ಪ್ರವೇಶಿಸಬಹುದು. ಆದರೆ ಮುರಳಿ ವಿಜಯ್‌ ಲಸಿಕೆ ಹಾಕಿಸಿಕೊಂಡಿಲ್ಲ.

ಇನ್ನೊಂದು ಸಂಗತಿಯೆಂದರೆ, ಅವರಿಗೆ ಈ ಜೈವಿಕ ಸುರಕ್ಷಾ ವಲಯವೂ ಇಷ್ಟವಿಲ್ಲವಂತೆ. ಕ್ರಿಕೆಟಿಗರು ಕೂಟದ ಆರಂಭಕ್ಕೂ ಒಂದು ವಾರ ಮೊದಲೇ ಜೈವಿಕ ಸುರಕ್ಷಾ ವಲಯ ಪ್ರವೇಶಿಸಬೇಕು. ಹಾಗೆಯೇ ಕೊನೆಯವರೆಗೂ ಅಲ್ಲಿಯೇ ಇರಬೇಕು. ಇದನ್ನು ಮುರಳಿ ವಿಜಯ್‌ ವಿರೋಧಿಸಿದ್ದಾರೆ. ಹಾಗಾಗಿ ಅವರನ್ನು ತಮಿಳುನಾಡು ಕ್ರಿಕೆಟ್‌ ಮಂಡಳಿ ಸಯ್ಯದ್‌ ಮುಷ್ತಾಕ್‌ ಅಲಿ ತಂಡದಿಂದ ಕೈಬಿಟ್ಟಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next