Advertisement

ನೈಜ ಸಾಧಕರಿಗೆ ಸಿಗುತ್ತಿಲ್ಲ ಪ್ರಶಸ್ತಿ

01:59 PM Mar 25, 2019 | pallavi |

ದಾವಣಗೆರೆ: ಪ್ರಸ್ತುತ ವಾತಾವರಣದಲ್ಲಿ ಸನ್ಮಾನ, ಪ್ರಶಸ್ತಿಗಳು ಡಾಂಭಿಕರು, ಮುಖವಾಡ ಹಾಕಿಕೊಂಡವರ ಪಾಲಾಗುತ್ತಿರುವುದು ಕಂಡು ಬರುತ್ತಿದೆ ಎಂದು ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.

Advertisement

ಭಾನುವಾರ ಕುವೆಂಪು ಕನ್ನಡ ಭವನದಲ್ಲಿ ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಮೋತಿ ಗೌರಮ್ಮ ಚಾರಿಟಬಲ್‌ ಟ್ರಸ್ಟ್‌ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಮಹಲಿಂಗ ರಂಗ ಮತ್ತು ಗ್ರಾಮೀಣ ಸಿರಿ… ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಇಂದು ವಿವಿಧ ಕ್ಷೇತ್ರದಲ್ಲಿ ಅಹರ್ನಿಶಿ ಸಾಧನೆ ಮಾಡಿದ ನೈಜ ಸಾಧಕರಿಗೆ ಪ್ರಶಸ್ತಿ, ಸನ್ಮಾನ ದೊರೆಯದೇ ಇರುವುದು ಕಳವಳಕಾರಿ ವಿಚಾರ ಎಂದರು.

ಒಳ್ಳೆಯ ವೇಷಭೂಷಣ, ಡಾಂಭಿಕತೆಯವರು, ಮುಖವಾಡ ಹಾಕಿಕೊಂಡಂತಹವರಿಗೆ ಪ್ರಶಸ್ತಿ, ಸನ್ಮಾನ ಪಡೆಯುವ ಮೂಲಕ ಹೆಚ್ಚಿನ ಮನ್ನಣೆಗೆ ಪಾತ್ರರಾಗುತ್ತಿದ್ದಾರೆ. ಪ್ರಶಸ್ತಿ ಮತ್ತು ಸನ್ಮಾನವನ್ನ ತಮ್ಮ ಸ್ವಾರ್ಥ ಸಾಧನೆಗೆ ಬಳಕೆ ಮಾಡಿಕೊಳ್ಳುವರು ಇದ್ದಾರೆ. ಪ್ರಶಸ್ತಿಗಳೇ ನಮ್ಮ ಬೆನ್ನ ಹಿಂದೆ
ಬರಬೇಕೇ ಹೊರತು ಪ್ರಶಸ್ತಿಯ ಹಿಂದೆ ಬೆನ್ನತ್ತಿ ಹೋಗುವಂತಾಗಬಾರದು ಎಂದು ತಿಳಿಸಿದರು.

ಸಮಾಜ ಮತ್ತು ಸೂಕ್ತ ಸ್ಥಾನಮಾನದಲ್ಲಿ ಇದ್ದವರು ವಿವಿಧ ಕ್ಷೇತ್ರದಲ್ಲಿನ ಕಲಾವಿದರು, ಸಾಧಕರನ್ನ ಗುರುತಿಸಿ ಸನ್ಮಾನ, ಪ್ರಶಸ್ತಿ ನೀಡುವ ಮೂಲಕ ಪ್ರೋತ್ಸಾಹಿಸಬೇಕು. ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಲವಾರು ವರ್ಷದಿಂದ ತೆರೆಯ ಮರೆಯಲ್ಲಿನ ಸಾಧಕರನ್ನ ಗುರುತಿಸಿ ಮಹಲಿಂಗ ರಂಗ, ಗ್ರಾಮೀಣ ಸಿರಿ ಪ್ರಶಸ್ತಿ ಪ್ರದಾನ ಮಾಡುವ ಗೌರವಿಸುತ್ತಿರುವುದು ಶ್ಲಾಘನೀಯ ಎಂದು ಸಂತಸ ವ್ಯಕ್ತಪಡಿಸಿದರು.

ಇಂದಿನ ಆಧುನಿಕ ತಂತ್ರಜ್ಞಾನ ಯುಗದಲ್ಲೂ ಅನೇಕ ಕಾಣದ ಕೈಗಳ ಗೊತ್ತೆ ಆಗದಂತೆ ಮಾಡುತ್ತಿರುವ ಸಮಾಜಮುಖೀ ಸೇವಾ ಕಾರ್ಯದಿಂದಾಗಿ ಸುಭಿಕ್ಷ ವಾತಾವರಣ ಕಂಡು ಬರುತ್ತಿದೆ. ಅಂತಹ ಸಾಧನಾ ಜೀವಿಗಳನ್ನ ಗುರುತಿಸಬೇಕು. ಅಚ್ಚರಿಯ ವಿಷಯ ಎಂದರೆ ಸಾಧಕರನ್ನ ಮೊದಲಿಗೆ ಅನಮಾನದಿಂದಲೇ ನೋಡಲಾಗುತ್ತದೆ. ಅಪಮಾನವನ್ನೂ ಮಾಡಲಾಗುತ್ತದೆ. ಅಂತಿಮವಾಗಿ ಸನ್ಮಾನ ಮಾಡುವುದು ಸಹ ಕಂಡು ಬರುತ್ತದೆ ಎಂದರು.

Advertisement

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ| ಎಚ್‌.ಎಸ್‌. ಮಂಜುನಾಥ್‌ ಕುರ್ಕಿ ಮಾತನಾಡಿ, ಸಂಸ್ಕೃತ ಭಾಷೆಯ ದಟ್ಟ ಪ್ರಭಾವದ ನಡುವೆಯೂ ನಮ್ಮ ಜಿಲ್ಲೆಯವರೇ ಆದ ಮಹಲಿಂಗ ರಂಗರು ಅನುಭಾವಮೃತ.. ಕೃತಿಯ ಮೂಲಕ ಕನ್ನಡದ ಹಿರಿಮೆ-ಗರಿಮೆ ಎತ್ತಿ ಹಿಡಿದವರಾಗಿದ್ದಾರೆ. ಕನ್ನಡ ನಾಡು, ನುಡಿ, ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ಹೆಸರಲ್ಲಿ 17 ವರ್ಷದಿಂದ ಮಹಲಿಂಗ ರಂಗ ಪ್ರಶಸ್ತಿ ನೀಡಲಾಗುತ್ತಿದೆ ಎಂದು ತಿಳಿಸಿದರು.

ಜಗಳೂರಿನ ನಿವೃತ್ತ ಉಪನ್ಯಾಸಕ ಜಿ.ಎಸ್‌. ಸುಭಾಶ್ಚಂದ್ರ ಬೋಸ್‌ ಅಭಿನಂದನಾ ನುಡಿಗಳಾಡಿದರು. ಮೋತಿ ಆರ್‌. ಪರಮೇಶ್ವರರಾವ್‌, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷರಾದ ಬಿ.ಎಂ. ಸದಾಶಿವಪ್ಪ ಶ್ಯಾಗಲೆ. ಎ.ಆರ್‌. ಉಜ್ಜನಪ್ಪ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಿ. ವಾಮದೇವಪ್ಪ ಇತರರು ಇದ್ದರು. ವಿನೂತನ ಮಹಿಳಾ ಸಮಾಜದ ಪದಾಧಿಕಾರಿಗಳು ನಾಡಗೀತೆ ಹಾಡಿದರು. ಬಿ. ದಿಳೆಪ್ಪ ಸ್ವಾಗತಿಸಿದರು.

ಲೀಡ್‌ಬ್ಯಾಂಕ್‌ ವಿಭಾಗೀಯ ಪ್ರಬಂಧಕ ಎನ್‌.ಟಿ. ಎರ್ರಿಸ್ವಾಮಿ ಅವರಿಗೆ ಮಹಲಿಂಗ ರಂಗ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿ 10ಸಾವಿರ ನಗದು, ಸ್ಮರಣಿಕೆ, ಪ್ರಶಸ್ತಿ ಫಲಕ ಒಳಗೊಂಡಿದೆ. ಸಿದ್ದಗಂಗಾ ವಿದ್ಯಾಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್‌ ಡಿಸೋಜಾ, ಮಹಾನಗರ ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಕೆ.ಎಸ್‌. ಗೋವಿಂದರಾಜ್‌ ಅವರಿಗೆ ಮಹಾನಗರ ಸಿರಿ… ಪ್ರಶಸ್ತಿಯನ್ನ ಈಶ್ವರೀಯ ವಿಶ್ವವಿದ್ಯಾಲಯ ಸಂಚಾಲಕಿ ಬಿ.ಕೆ. ಲೀಲಾಜೀ ಪ್ರದಾನ ಮಾಡಿದರು. ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪ್ರಕಾಶ್‌ ಕುಗ್ವೆ… ಅವರನ್ನು ಗೌರವಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next