Advertisement

ನೂಜಿಬಾಳ್ತಿಲ: ಪಂಜಳ ಸೇತುವೆ, ರಸ್ತೆಗೆ ಅನುದಾನ ಮಂಜೂರು…ಹಲವು ವರ್ಷಗಳ ಬೇಡಿಕೆಗೆ ಮನ್ನಣೆ

09:58 PM Jan 05, 2023 | Team Udayavani |

ಸುಬ್ರಹ್ಮಣ್ಯ: ನೂಜಿಬಾಳ್ತಿಲ ಗ್ರಾಮದ ಕುಬಲಾಡಿ ಬಳಿಯ ಪಂಜಳ ಪರಿಶಿಷ್ಟ ಜಾತಿ ಕಾಲನಿ ಬಳಿ ಹರಿಯುವ ತೋಡಿಗೆ ಸೇತುವೆ ನಿರ್ಮಿಸಬೇಕೆಂಬ ಬಹುಕಾಲದ ಬೇಡಿಕೆಗೆ ಮನ್ನಣೆ ದೊರೆತಿದ್ದು, ರಸ್ತೆ ಹಾಗೂ ಸೇತುವೆ ಅಭಿವೃದ್ಧಿಗೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಅನುದಾನ ಬಿಡುಗಡೆಯಾಗಿದೆ.

Advertisement

ನೂಜಿಬಾಳ್ತಿಲ ಗ್ರಾ. ಪಂ. ವ್ಯಾಪ್ತಿಯ ಕುಬಲಾಡಿ ಬಳಿಯ ಪಂಜಳ ಪರಿಶಿಷ್ಟ ಜಾತಿ ಕಾಲನಿಯ ಜನತೆ ಇಲ್ಲಿ ಹರಿಯುವ ತೋಡಿಗೆ ಸೇತುವೆ ಇಲ್ಲದೆ ನೀರು ದಾಟಿ ತೆರಳುತ್ತಿದ್ದರು. ಮಳೆಗಾಲದಲ್ಲಿ ಸುತ್ತು ಬಳಸಿ ಕಡಬ, ಕೊಲ್ಯದಕಟ್ಟೆ, ವಿಮಲಗಿರಿ, ಉಕ್ಕಿನಡ್ಕ ಭಾಗದತ್ತ ತೆರಳಬೇಕಾಗಿತ್ತು.

ಶಾಲಾ-ಕಾಲೇಜಿನ ಮಕ್ಕಳು ಸೇತುವೆ ಇಲ್ಲದೆ ಸಂಕಷ್ಟ ಅನುಭವಿಸುತ್ತಿದ್ದರು. ಇಲ್ಲಿ ಸೇತುವೆ ನಿರ್ಮಿಸುವಂತೆ ಹಲವು ವರ್ಷಗಳಿಂದ ಸಂಬಂಧಿಸಿದವರಿಗೆ ಸ್ಥಳೀಯರು ಮನವಿ ಸಲ್ಲಿಸುತ್ತಾ ಬಂದಿದ್ದರು. ಆದರೆ ಈವರೆಗೆ ಮನವಿಗೆ ಪೂರಕ ವಾತಾವರಣ ನಿರ್ಮಾಣ ಆಗಿರಲೇ ಇಲ್ಲ. ಸದ್ಯ ಅನುದಾನ ಬಿಡುಗಡೆಗೊಂಡಿದೆ.

12.5 ಲಕ್ಷ ರೂ. ಅನುದಾನ
ಪಂಜಳ ಪರಿಶಿಷ್ಟ ಜಾತಿ ಕಾಲನಿಗೆ ರಸ್ತೆ ಅಭಿವೃದ್ಧಿಗೆ ಹಾಗೂ ಸೇತುವೆ ರಚನೆಗೆ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ 12.5 ಲಕ್ಷ ರೂ. ಅನುದಾನ ಬಿಡುಗಡೆಗೊಂಡಿದೆ. ಶೀಘ್ರ ಕಾಮಗಾರಿ ಆರಂಭವಾಗುವ ನಿರೀಕ್ಷೆ ಇದೆ. ಸೇತುವೆ ರಚನೆ ಹಾಗೂ ಸೇತುವೆ ಸಂಪರ್ಕ ರಸ್ತೆಯ ಅಭಿವೃದ್ಧಿ ಕಾರ್ಯವೂ ನಡೆಯಲಿದೆ. ಇಲ್ಲಿನ ಸಮಸ್ಯೆ ಹಾಗೂ ಬೇಡಿಕೆ ಬಗ್ಗೆ ಉದಯವಾಣಿ ಸುದಿನದಲ್ಲಿ ಸರಕಾರದ ಗಮನ ಸೆಳೆಯಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next