Advertisement

ಮಂಗಳೂರಿಗೆ ಬಂದ ಮೋದಿಗೆ ‘ನಮೋ ಮಂಜುನಾಥ’ಪುಸ್ತಕ 

02:09 PM Dec 19, 2017 | |

ಮಂಗಳೂರು: ಲಕ್ಷದ್ವೀಪ ಭೇಟಿಗಾಗಿ  ಮಂಗಳೂರಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಂಸದ ನಳಿನ್‌ ಕುಮಾರ್‌ ಕಟೀಲು ಅವರು ನಮೋ ಮಂಜುನಾಥ ಪುಸ್ತಕವನ್ನು ಮಂಗಳವಾರ ನೀಡಿದ್ದಾರೆ. 

Advertisement

ನಮೋ ಮಂಜುನಾಥ ಪುಸ್ತಕ ಪ್ರಧಾನಿ ನರೇಂದ್ರ ಮೋದಿ ಅವರ ಐತಿಹಾಸಿಕ ಧರ್ಮಸ್ಥಳ ಭೇಟಿಯ  ಚಿತ್ರಣವನ್ನು ಒಳಗೊಂಡಿದೆ. 

ಧರ್ಮಸ್ಥಳದ ಪುಸ್ತಕ ಎಂದಾಕ್ಷಣ ಅಂತ್ಯಂತ ಖುಷಿಯಿಂದ ಪುಸ್ತಕವನ್ನು ಸ್ವೀಕರಿಸಿ ಸಂಪೂರ್ಣ ಓದುವುದಾಗಿ  ಹೇಳಿದ್ದಾರೆ ಎಂದು ವರದಿಯಾಗಿದೆ. 

ಪ್ರಧಾನಿ ನರೇಂದ್ರ ಮೋದಿ ಒಖಿ  ಚಂಡಮಾರುತದಿಂದ ಸಂಭವಿಸಿದ ಹಾನಿಯನ್ನು ವೀಕ್ಷಿಸಲು ಲಕ್ಷದ್ವೀಪಕ್ಕೆಮಂಗಳವಾರ ಬೆಳಗ್ಗೆ ತೆರಳಿದರು. 

 ಬೆಳಗ್ಗೆ ಸರ್ಕೀಟ್‌  ಹೌಸ್‌ನಲ್ಲಿ ಬೆಳಗ್ಗಿನ ಉಪಾಹಾರ ಸೇವಿಸಿ 7.30ರ ಸುಮಾರಿಗೆ ರಸ್ತೆ ಮಾರ್ಗವಾಗಿ ಮಂಗಳೂರು ವಿಮಾನ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ವಾಯುಪಡೆಯ ವಿಶೇಷ ವಿಮಾನದ ಮೂಲಕ ಲಕ್ಷದ್ವೀಪಕ್ಕೆತೆರಳಿದ್ದಾರೆ.  ಒಖಿ ಚಂಡಮಾರುತ ಹಾನಿಯನ್ನು ವೀಕ್ಷಣೆ ಮಾಡಿ ಬಳಿಕ ತಿರುವನಂತಪುರ ಹಾಗೂ  ತಮಿಳುನಾಡಿಗೂ ತೆರಳುವ ಕಾರ್ಯಕ್ರಮವಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next