Advertisement

“ಬಿಎಸ್ ವೈಗೆ ಯಾರೂ ಬ್ರೇಕ್ ಹಾಕಿಲ್ಲ, ಬೇಕಾದಾಗ ಅವರೇ ಬ್ರೇಕ್ ಹಾಕುತ್ತಾರೆ”: ವಿಜಯೇಂದ್ರ

05:01 PM Sep 18, 2021 | Team Udayavani |

ದಾವಣಗೆರೆ: “ಬಿ.ಎಸ್.ಯಡಿಯೂರಪ್ಪನವರ ರಾಜ್ಯ ಪ್ರವಾಸಕ್ಕೆ ಯಾರೂ ಬ್ರೇಕ್ ಹಾಕಿಲ್ಲ. ಬದಲಿಗೆ ಎಲ್ಲ ಬ್ರೇಕ್ ಅವರ ಕೈಗೆ ಕೊಟ್ಟಿದ್ದಾರೆ. ಬೇಕಾದಾಗ ಅವರೇ ಬ್ರೇಕ್ ಹಾಕುತ್ತಾರೆ” ಇದು ಬಿಎಸ್‌ವೈ ಪುತ್ರ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಪ್ರತಿಕ್ರಿಯೆ.

Advertisement

ನಗರದಲ್ಲಿ ಶನಿವಾರ ಸಂಘಟಿಸಿದ್ದ ಪಕ್ಷದ ಕೋರ್ ಕಮಿಟಿ ಸಭೆಗೂ ಮುನ್ನ ಖಾಸಗಿ ಹೊಟೆಲ್‌ನಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

“ಯಾರು ಹೇಳಲಿ, ಬಿಡಲಿ ತಮ್ಮ ತಂದೆಯವರು (ಬಿ.ಎಸ್.ವೈ) ರಾಜ್ಯ ಪ್ರವಾಸ ಮಾಡುತ್ತಾರೆ. ಪಕ್ಷ ಸಂಘಟನೆ ನಮ್ಮ ತಂದೆಗೆ ರಕ್ತಗತವಾಗಿ ಬಂದಿದೆ” ಎಂದರು.

ಇದನ್ನೂ ಓದಿ:30 ನಿಮಿಷಗಳ ಅಂತರದಲ್ಲಿ ಎರಡು ಡೋಸ್ ಲಸಿಕೆ ಪಡೆದ ಕೇರಳದ 84 ವರ್ಷದ ವೃದ್ದೆ

ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ವಿಧಾನಸಭೆ ಉಪಚುನಾವಣೆಗೆ ಸಂಬಂಧಿಸಿ ಹಾಗೂ ಇತರ ಮಹತ್ವ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತದೆ. ಉಪಚುನಾವಣೆಯ ಉಸ್ತುವಾರಿ ಯಾರಿಗೆ ವಹಿಸಬೇಕು ಎಂಬುದು ಪಕ್ಷದ ಅಧ್ಯಕ್ಷರಿಗೆ ಬಿಟ್ಟ ವಿಚಾರ ಎಂದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next