Advertisement

Nobel ಪ್ರಶಸ್ತಿ ನನಗೆ ನೀಡಬೇಕು: ಕೇಜ್ರಿವಾಲ್‌ ಮೂದಲಿಕೆ

12:39 AM Feb 26, 2024 | Team Udayavani |

ಹೊಸದಿಲ್ಲಿ: ಹಲವಾರು ಸಮಸ್ಯೆಗಳ ನಡುವೆಯೂ ನಾನು ದಿಲ್ಲಿಯಲ್ಲಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸುತ್ತಿರುವುದಕ್ಕೆ ನನಗೆ ನೊಬೆಲ್‌ ಪ್ರಶಸ್ತಿ ನೀಡಬೇಕು ಎಂದು ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಲಘು ಹಾಸ್ಯ ಮಾಡಿದ್ದಾರೆ.

Advertisement

ಬಿಜೆಪಿ ನೇತೃತ್ವದ ಕೇಂದ್ರ ಸರಕಾರದೊಂದಿಗಿನ ಹಲವು ಸಂಘರ್ಷಗಳ ನಡುವೆಯೂ ಉತ್ತಮ ಆಡಳಿತ ನೀಡುತ್ತಿದ್ದೇನೆ. ಕೇಂದ್ರ ಸರಕಾರ ಕ್ಕೆ ಹೆದರಿರುವ ಅಧಿಕಾರಿಗಳು, ರಾಜ್ಯ ಸರಕಾರದ ಆದೇಶಗಳನ್ನು ಪಾಲಿಸುತ್ತಿಲ್ಲ. ಅಲ್ಲದೆ, ರಾಜ್ಯ ಸರಕಾರದ ಯೋಜನೆಗಳನ್ನು ಜಾರಿಗೆ ತರದಂತೆ ಕೇಂದ್ರವು ಅಧಿಕಾರಿಗಳನ್ನು ಬೆದರಿಸುತ್ತಿದೆ. ಇದೆಲ್ಲದರ ನಡುವೆಯೂ ನಾನು ಯಶಸ್ವಿಯಾಗಿ ಸರಕಾರ ನಡೆಸುತ್ತಿರು ವುದರಿಂದ ನೊಬೆಲ್‌ ಪ್ರಶಸ್ತಿಗೆ ಅರ್ಹ ಎಂದು ಕೇಂದ್ರ ಬಿಜೆಪಿ ಸರಕಾರ ವನ್ನು ಮೂದಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next