ಹೀಗಾಗಿ ಎಲ್ಲ ಜಿಲ್ಲಾ ನ್ಯಾಯಾಲಯಗಳಲ್ಲಿ 4 ದಿನಗಳಿಂದ ಸ್ವತ್ಛತೆ ಕಾರ್ಯ ಸ್ಥಗಿತಗೊಂಡಿದೆ. ಡಿ ಗ್ರೂಪ್ ನೌಕರರು ಈ ಕೆಲಸ ಮಾಡಲು ಮಾನಸಿಕವಾಗಿ ಸಿದ್ಧರಿಲ್ಲದಿರುವುದು ಹಾಗೂ ಅವರಿಂದ ಒತ್ತಾಯ ಪೂರ್ವಕವಾಗಿ ಮಾಡಿಸಲು ಮೇಲಧಿಕಾರಿಗಳು ತಯಾರಿಲ್ಲ.
Advertisement
ಸರಕಾರದ ಉತ್ತರಜಿಲ್ಲಾ ನ್ಯಾಯಾಲಯಗಳಲ್ಲಿನ ಹೊರಗುತ್ತಿಗೆಯ ಸ್ವತ್ಛತಾ ಕಾರ್ಮಿಕರಿಗೆ ವೇತನ ಪಾವತಿಸಲು 1.30 ಕೋಟಿ ರೂ. ಹೆಚ್ಚುವರಿಯಾಗಿ ನೀಡಬೇಕು ಎಂದು ಹೈಕೋರ್ಟಿನ ರಿಜಿಸ್ಟ್ರಾರ್ ಜನರಲ್ ರಾಜ್ಯ ಸರಕಾರಕ್ಕೆ 2018 ಸೆ. 10ರಂದು ಪತ್ರ ಬರೆದಿದ್ದರು. ಇದಕ್ಕೆ ಪ್ರತಿಯಾಗಿ 2017 ಜು. 7ರ ಆದೇಶದಂತೆ ಹೊರ ಗುತ್ತಿಗೆ ನೌಕರರನ್ನು ಕೈಬಿಟ್ಟು, ಆ ಕೆಲಸಕ್ಕೆ 1981ರ ನ. 17ರ ಆದೇಶದಂತೆ ಡಿ ಗ್ರೂಪ್ ನೌಕರರನ್ನು ಬಳಸಿಕೊಳ್ಳುವಂತೆ ಸರಕಾರ ಸೂಚಿಸಿತು.
ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್, ಬೆಂಗಳೂರು ಗ್ರಾಮಾಂತರ, ಬಾಗಲಕೋಟೆ, ಬೆಳಗಾವಿ, ಬಳ್ಳಾರಿ, ವಿಜಯಪುರ, ಬೀದರ್, ಚಾಮರಾಜ ನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ದ. ಕ. (ಮಂಗಳೂರು), ಧಾರವಾಡ, ಗದಗ, ಕಲಬುರಗಿ, ಹಾಸನ, ಹಾವೇರಿ, ಕೊಡಗು (ಮಡಿಕೇರಿ), ಕೋಲಾರ, ಕೊಪ್ಪಳ, ಮಂಡ್ಯ, ಮೈಸೂರು, ರಾಮನಗರ, ರಾಯಚೂರು, ಶಿವಮೊಗ್ಗ, ತುಮಕೂರು, ಉಡುಪಿ, ಉತ್ತರ ಕನ್ನಡ (ಕಾರವಾರ), ಯಾದಗಿರಿ ಜಿಲ್ಲಾ ನ್ಯಾಯಾಲಯಗಳ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶರಿಗೆ ಆದೇಶವನ್ನು ಕಳುಹಿಸಲಾಗಿದೆ.
ಮೂರೂವರೆ ವರ್ಷಗಳಿಂದ ಹೊರ ಗುತ್ತಿಗೆ ಪದ್ಧತಿ ಜಾರಿಯಲ್ಲಿದ್ದು, ಆ ಕಾರ್ಮಿಕರಿಗೆ 4 ತಿಂಗಳ ವೇತನ ನೀಡಬೇಕಿದೆ. ಮಂಗಳೂರು ನ್ಯಾಯಾಲಯದಲ್ಲಿ 14 ಮಂದಿ ಕಾರ್ಯ ನಿರ್ವಹಿಸುತ್ತಿದ್ದು, ತಿಂಗಳಿಗೆ 1.30 ಲಕ್ಷ ರೂ. ವೇತನವನ್ನು ಸರಕಾರ ನೀಡುತ್ತಿತ್ತು.
Related Articles
ಜಿಲ್ಲೆಯಲ್ಲಿ 37 ನ್ಯಾಯಾಲಯಗಳಿದ್ದು, 198 ಡಿ ಗ್ರೂಪ್ ಹುದ್ದೆಗಳು ಮಂಜೂರಾಗಿವೆ. 126 ಹುದ್ದೆಗಳು ಖಾಲಿಯಿವೆ. ಉಳಿದಂತೆ 72 (ಶೇ. 36)ರಲ್ಲಿ 46 ಜವಾನರು ಹಾಗೂ 26 ಮಂದಿ ಅಟೆಂಡರ್ಗಳು ಸೇವೆ ಸಲ್ಲಿಸುತ್ತಿದ್ದಾರೆ. ಮಂಗಳೂರಿನಲ್ಲಿ 22 ನ್ಯಾಯಾಲಯಗಳಿದ್ದು, ಇಲ್ಲಿ 100 ಹುದ್ದೆಗಳ ಪೈಕಿ 35 ಮಂದಿ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ.
Advertisement
ಹಿಲರಿ ಕ್ರಾಸ್ತಾ