Advertisement
2 ಅಂಗಡಿಗಳಿಂದ ವಿತರಣೆ: ಅಮಾನತುಗೊಂಡಿದ್ದಎಸ್.ಚದುನಮಹಳ್ಳಿ, ಪೂಜಾರಹಳ್ಳಿ, ಸುಣ್ಣಂಗೂರು, ಗುಮ್ಮಕಲ್ಲು, ಚಾಮರೆಡ್ಡಿಹಳ್ಳಿ, ಹೂಂತಾಡ್ಲಹಳ್ಳಿ ಈ ಆರು ನ್ಯಾಯಬೆಲೆ ಅಂಗಡಿಗಳ ಪೈಕಿ ಪ್ರಸ್ತುತ ಎಸ್. ಚದುನಮಹಳ್ಳಿ ಕಾರ್ಯದರ್ಶಿ ಜಗದೀಶ್ಗೆ ನಿಯೋಜನೆಗೊಂಡಿರುವಅಂಗೊಡಹಳ್ಳಿನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ವಿತರಣೆ ಮಾಡಲಾಗಿದೆ. ಗುಮ್ಮಕಲ್ಲು ನ್ಯಾಯಬೆಲೆ ಅಂಗಡಿ ಮಾಲೀರಾಮರೆಡ್ಡಿ ಗುಮ್ಮಕಲ್ಲುಗೆ ನಿಯೋಜನೆ ಗೊಂಡಿರುವ ಮುದಿಗೆರೆ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ವಿತರಣೆ ಮಾಡಲಾಗಿದೆ.
Related Articles
Advertisement
ಒಟ್ಟಿನಲ್ಲಿ ತಾಲೂಕಿನ ಆರು ನ್ಯಾಯಬೆಲೆ ಅಂಗಡಿಗಳಲ್ಲಿ ತೊಗರಿಬೇಳೆ ವಿತರಣೆಯಲ್ಲಿ ಆಗಿರುವ ಅವ್ಯವಹಾರದ ಕುರಿತು ಆಹಾರಇಲಾಖೆ ಉಪ ನಿರ್ದೇಶಕರು ಪ್ರಾಧಿಕಾರವನ್ನು ನಾಮ್ಕಾವಸ್ತೆಗೆಅಮಾನತುಗೊಳಿಸಿದರೂ ಸದರಿ ಆದೇಶ ಪಾಲಿಸಲು ತಹಶೀಲ್ದಾರ್ ಮತ್ತು ಆಹಾರ ಇಲಾಖೆ ಅಧಿಕಾರಿಗಳು ವಿಫಲವಾಗಿದ್ದಾರೆ. ಇನ್ನಾದರೂ ಆಹಾರ ಇಲಾಖೆ ಆಯುಕ್ತರು ಇತ್ತಕಡೆ ಗಮನ ಹರಿಸಬೇಕಾಗಿದೆ.
ಹತ್ತಿರದ ನ್ಯಾಯಬೆಲೆ ಅಂಗಡಿಗೆ ನಿಯೋಜಿಸಲು ಮೀನಮೇಶ : ನ್ಯಾಯಬೆಲೆ ಅಂಗಡಿಗಳ ಅಮಾನತು ಆದೇಶವನ್ನು ಉಪ ನಿರ್ದೇಶಕರು ಮುದ್ದಾಂ ಮೂಲಕ ಮುಳಬಾಗಿಲು ತಹಶೀಲ್ದಾರ್ಗೆಕಳುಹಿಸಿದ್ದರೂ ಅವರು ಅಮಾನತು ಅಂಗಡಿಗಳನ್ನು ಹತ್ತಿರದ ನ್ಯಾಯಬೆಲೆ ಅಂಗಡಿಗಳಿಗೆ ನಿಯೋಜಿಸಲು ಮೀನಮೇಶ ಎಣಿಸುತ್ತಿರುತ್ತಾರೆ.ಗುಮ್ಮಕಲ್ ನ್ಯಾಯಬೆಲೆ ಅಂಗಡಿ ಮಾಲೀಕ ರಾಮರೆಡ್ಡಿ ಅಮಾನತುಗೊಂಡಿದ್ದರೂ ತಮ್ಮ ಗುಮ್ಮಕಲ್ ನ್ಯಾಯಬೆಲೆ ಅಂಗಡಿಯಲ್ಲಿ ಅ.18,19,20 ರಂದು ಗ್ರಾಹಕರ ಪಡಿತರ ಚೀಟಿಗಳಿಗೆ ಧಾನ್ಯಗಳನ್ನು ವಿತರಣೆ ಮಾಡಿದ್ದಾರೆ. ಅಲ್ಲದೇ ಸದರಿ ರಾಮರೆಡ್ಡಿ ಅ.20 ರಂದು ಏಕಕಾಲಕ್ಕೆ ಈ ಮೊದಲೇ ನಿಯೋಜಿಸಿಕೊಂಡಿದ್ದ ಮುದಿಗೆರೆ ನ್ಯಾಯಬೆಲೆ ಅಂಗಡಿಯಲ್ಲಿಯೂ ಸಹ 226 ಚೀಟಿಗಳಿಗೆ ಪಡಿತರ ಧಾನ್ಯಗಳನ್ನು ವಿತರಣೆ ಮಾಡಿದ್ದಾರೆ. ಎಸ್.ಚದುಮನಹಳ್ಳಿ ನ್ಯಾಯಬೆಲೆ ಅಂಗಡಿಯಲ್ಲಿಕಾರ್ಯದರ್ಶಿ ಜಗದೀಶ್ ತೊಗರಿ ಬೇಳೆ ದುರುಪಯೋಗ ಪಡಿಸಿಕೊಂಡಿದ್ದರಿಂದ ಅಮಾನತುಗೊಂಡಿದ್ದರೂ ಅವರ ಊಮಿಟ್ಟೂರು ನ್ಯಾಯಬೆಲೆ ಅಂಗಡಿಗೆ ನಿಯೋಜನೆಗೊಂಡಿದ್ದು, ಅಂಗೊಂಡಹಳ್ಳಿ ನ್ಯಾಯಬೆಲೆ ಅಂಗಡಿಯಲ್ಲಿ ಅ.19 ಮತ್ತು20 ರಂದು ಪಡಿತರ ಧಾನ್ಯಗಳನ್ನು ವಿತರಣೆ ಮಾಡಿದ್ದಾರೆ.
ತಹಶೀಲ್ದಾರ್ರಿಂದ ವರದಿ ಬಂದಿಲ್ಲ : ಈ ಕುರಿತು ಪ್ರತಿಕ್ರಿಯಿಸಿದ ಉಪ ನಿರ್ದೇಶಕರು ನಾಗರಾಜ, ಅಮಾನತು ಆದೇಶವನ್ನು ತಹಶೀ ಲ್ದಾರ್ಗೆ ಕಳುಹಿಸಿದ್ದು 6 ನ್ಯಾಯಬೆಲೆ ಅಂಗಡಿಗಳನ್ನು ಹತ್ತಿರದ ನ್ಯಾಯಬೆಲೆ ಅಂಗಡಿಗಳಿಗೆ ನಿಯೋಜಿಸಲು ಸೂಚಿಸಿದೆ. ಅವರಿಂದ ವರದಿ ಇನ್ನೂ ಬಂದಿರುವುದಿಲ್ಲ. ಅಲ್ಲದೇ ಇಕೆವೈಸಿ ರದ್ದುಗೊಳಿಸುವ ಅವಕಾಶವಿಲ್ಲವೆಂದರು. ತಹಶೀಲ್ದಾರ್ರಿಂದ ವರದಿ ಬಂದ ನಂತರ ಬೇರೆ ಅಂಗಡಿಗಳಿಗೆ ನಿಯೋಜಿಸಿದ ನಂತರ ಇಕೆವೈಸಿಯನ್ನುಬದಲಾಯಿಸಲಾಗುವುದು. ಅಲ್ಲದೇ ಅಮಾನತುಗೊಂಡಿರುವ6 ನ್ಯಾಯಬೆಲೆ ಅಂಗಡಿ ಮಾಲೀಕರು ಪಡಿತರ ಧಾನ್ಯಗಳನ್ನು ವಿತರಿಸಲು ಅವಕಾಶವಿರುವುದಿಲ್ಲ, ಒಂದು ವೇಳೆ ಸದರಿ ಅಮಾನತು ಆದೇಶವನ್ನು ಉಲ್ಲಂ ಸಿ ಪಡಿತರ ವಿತರಣೆ ಮಾಡಿದ್ದರೆ ವಿಚಾರಣೆ ಸಂದರ್ಭದಲ್ಲಿ ಅವರ ದುರ್ನಡತೆಯನ್ನು ಪರಿಗಣಿಸಲಾಗುವುದು ಎಂದು ತಿಳಿಸಿದರು.
ಸಾಕಷ್ಟು ಚುನಾವಣಾಕೆಲಸ ಕಾರ್ಯಗಳು, ಒತ್ತಡ ಇರುವುದರಿಂದ ಇತ್ತ ಕಡೆ(ಉಪ ನಿರ್ದೇಶಕರು 6 ನ್ಯಾಯ ಬೆಲೆ ಅಂಗಡಿ ಅಮಾನತುಗೊಳಿಸಿ ಹತ್ತಿರದ ಅಂಗಡಿಗಳಿಗೆ ನಿಯೋಜಿಸುವ ಸೂಚನೆ) ಆದೇಶ ಗಮನಹರಿಸಲು ಸಾಧ್ಯವಾಗಲಿಲ್ಲ.ಅಮಾನತಾಗಿರುವ ಆರು ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗುವುದು.–ರಾಜಶೇಖರ್, ತಹಶೀಲ್ದಾರ್