Advertisement

ಯೋಗಿ ವಿಚಾರಣೆ: ಕೋರ್ಟ್‌ಗೆ ಅನುಮತಿ ನಿರಾಕರಿಸಿದ ಸರಕಾರ

01:20 AM May 12, 2017 | Karthik A |

ಲಕ್ನೋ: 2007ರ ಗೋರಖ್‌ಪುರ ಗಲಭೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರ ವಿಚಾರಣೆ ನಡೆಸುವುದಿಲ್ಲ ಎಂದು ಅಲಹಾಬಾದ್‌ ಹೈಕೋರ್ಟ್‌ಗೆ ಉತ್ತರ ಪ್ರದೇಶ ಸರಕಾರ ಉತ್ತರ ನೀಡಿದೆ. ಅಲ್ಲದೇ ಯೋಗಿ ಅವರ ಖುದ್ದು ಹಾಜರಾತಿಯಾಗಲು ಸಾಧ್ಯವಿಲ್ಲ ಎಂದು ಹೇಳಿದೆ. ಇದನ್ನು ಉತ್ತರ ಪ್ರದೇಶದ ಅಡ್ವೊಕೇಟ್‌ ಜನರಲ್‌ ಅವರು ಹೈಕೋರ್ಟ್‌ ಪೀಠಕ್ಕೆ ತಿಳಿಸಿದ್ದಾರೆ.  ಇದಕ್ಕೂ ಮುನ್ನ ಯೋಗಿ ಅವರ ವಿಚಾರಣೆಗೆ ಅನುಮತಿ ನೀಡಲು ಮೀನಮೇಷ ಎಣಿಸುತ್ತಿರುವ ಬಗ್ಗೆ ಸರಕಾರವನ್ನು ಹೈಕೋರ್ಟ್‌ ವಿಭಾಗೀಯ ಪೀಠ ತರಾಟೆಗೆ ತೆಗೆದುಕೊಂಡಿತ್ತು. ಗೋರಖ್‌ಪುರ ಗಲಭೆ ವೇಳೆ ಯೋಗಿ ಸಂಸದರಾಗಿದ್ದರು ಜೊತೆಗೆ ಆರೋಪಿಯಾಗಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next