Advertisement

ರಾಜ್ಯದಲ್ಲಿ ಯಾವುದೇ ರೀತಿಯ ಪವರ್ ಕಟ್ ಇಲ್ಲ : ಸಿಎಂ ಬಸವರಾಜ ಬೊಮ್ಮಾಯಿ

09:40 PM Oct 12, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ ವಿದ್ಯುತ್ ಅಭಾವ ಎದುರಾಗದಂತೆ ನೋಡಿಕೊಳ್ಳುತ್ತೇವೆ. ಯಾವುದೇ ರೀತಿಯ ಪವರ್ ಕಟ್ ಇಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ಇಂದು ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಮಾಧ್ಯಮಗಳ ಎದುರು ಮಾತನಾಡಿದ ಸಿಎಂ, ಕಲ್ಲಿದ್ದಲು ಪೂರೈಕೆಗೆ ಕೇಂದ್ರ ಸಚಿವರಿಗೆ ಮನವಿ ಮಾಡಿದ್ದೇನೆ. ಎರಡು ರೇಕ್ ನೀಡುವುದಾಗಿ ಭರವಸೆ ನೀಡಿದ್ದಾರೆ. ಆದರೆ, ಮೂರು ರೇಕ್ ಸಿಕ್ಕರೆ ಸಮಸ್ಯೆ ಬಗೆಹರಿಯುತ್ತದೆ. ಇಂದು ಎರಡು ಪ್ರಮುಖ ಸಭೆ ನಡೆಸಿದ್ದೇನೆ. ತೆಲಂಗಾಣ ಸಿಎಂ ಜೊತೆಗೆ ಮಾತಾಡುತ್ತಿದ್ದೇನೆ. ಅಲ್ಲಿಂದು  ಹತ್ತರಿಂದ ಹನ್ನೆರಡು ರೇಕ್ ಸಿಗುವಂತೆ ಮಾತನಾಡಲಾಗಿದೆ. ನಮ್ಮ ಸರ್ಕಾರ ಫೇಲ್ ಆಗಿಲ್ಲ. ಒರಿಸ್ಸಾದಲ್ಲಿ ಮಳೆ ಹೆಚ್ಚಾಗಿದೆ. ಆದ್ದರಿಂದ ಕಲ್ಲಿದ್ದಲು ಬರಲು ನಿಧಾನವಾಗಿ ಆಗಿದೆ ಎಂದರು.

ಈ ಬಾರಿ ಹೆಚ್ಚು ಮಳೆ ಆಗಿದೆ. ಮಳೆಯಿಂದ ಇದುವರೆಗೆ 4 ಲಕ್ಷ 71 ಸಾವಿರ ಎಕ್ಕರೆ ಕೃಷಿ ಭೂಮಿ ಹಾಳಾಗಿದೆ. ಮಳೆಗೆ  ಅಕ್ಟೋಬರ್ 1 ರಿಂದ ಇಲ್ಲಿಯ ವರೆಗೂ 21 ಜನ ಸತ್ತಿದ್ದಾರೆ. ಅವರಿಗೆ ಪರಿಹಾರ ನೀಡಲು ಸೂಚಿಸಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next