Advertisement

ತೃತೀಯ ರಂಗದ ಸಾಧ್ಯತೆ ಇಲ್ಲ: ಮೋದಿ ಭೇಟಿ ಬಳಿಕ ಒಡಿಶಾ ಸಿಎಂ ನವೀನ್ ಪಟ್ನಾಯಕ್

03:20 PM May 12, 2023 | Team Udayavani |

ಹೊಸದಿಲ್ಲಿ: ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು 2024 ರ ರಾಷ್ಟ್ರೀಯ ಚುನಾವಣೆಗೆ ಯಾವುದೇ ಮೈತ್ರಿಗೆ ಸೇರುವ ಸಾಧ್ಯತೆಯನ್ನು ಗುರುವಾರ ತಳ್ಳಿಹಾಕಿದ್ದಾರೆ.

Advertisement

ತಮ್ಮ ಪಕ್ಷ ಬಿಜು ಜನತಾ ದಳ (ಬಿಜೆಡಿ) ಯಾವಾಗಲೂ ಮಾಡಿದಂತೆ ಮುಂದಿನ ವರ್ಷದ ಲೋಕಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಎಂದು ಪಟ್ನಾಯಕ್ ಘೋಷಿಸಿದರು. ನವೀನ್ ಪಟ್ನಾಯಕ್ ಅವರು ನಿನ್ನೆ ಸಂಜೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ್ದು, ಇದನ್ನು ಸೌಜನ್ಯದ ಭೇಟಿ ಎಂದು ಕರೆದಿದ್ದಾರೆ.

“ನನ್ನ ಮಟ್ಟಿಗೆ ತೃತೀಯ ರಂಗದ ಸಾಧ್ಯತೆ ಇಲ್ಲ. ಬೇರೆ ರಾಜಕೀಯ ನಾಯಕರ ಜೊತೆ ಯಾವುದೇ ಸಭೆಗಳು ನಡೆಯುತ್ತಿಲ್ಲ. ನಾನು ನಿತೀಶ್ ಕುಮಾರ್ ಅವರನ್ನು ಭೇಟಿ ಮಾಡಿದ್ದು ಸೌಜನ್ಯದ ಭೇಟಿಯಾಗಿದೆ” ಎಂದು ನವೀನ್ ಪಟ್ನಾಯಕ್ ಹೇಳಿದ್ದಾರೆ.

ಇದನ್ನೂ ಓದಿ:ಇಮ್ರಾನ್ ಖಾನ್ ಬಂಧನ ವಿರೋಧಿಸಿ ಕಲ್ಲು ತೂರಾಟ: ಶ್ರೀನಗರ ಹೆದ್ದಾರಿ ಬಂದ್

ಮಂಗಳವಾರ ಮೋದಿ ಭೇಟಿ ಮಾಡಿದ ಅವರು, “ಇದು ಸೌಜನ್ಯದ ಭೇಟಿ, ಚೆನ್ನಾಗಿ ನಡೆಯಿತು” ಎಂದು ಹೇಳಿದರು.

Advertisement

ಕಾಂಗ್ರೆಸ್ ಮತ್ತು ಬಿಜೆಪಿ ಎರಡರಿಂದಲೂ ಸಮಾನವಾಗಿ ದೂರ ಉಳಿದಿರುವ ಬಿಜೆಡಿಯ ನಿಲುವನ್ನು ಪುನರುಚ್ಚರಿಸಿದ ಒಡಿಶಾ ಸಿಎಂ, ತಮ್ಮ ರಾಜ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪ್ರಸ್ತಾಪಿಸಲು ಪ್ರಧಾನಿಯನ್ನು ಭೇಟಿಯಾಗಿರುವುದಾಗಿ ಹೇಳಿದರು.

“ನಾನು ಪಿಎಂ ಮೋದಿಯನ್ನು ಭೇಟಿ ಮಾಡಿ ಒಡಿಶಾಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸಿದ್ದೇನೆ. ಭುವನೇಶ್ವರದಲ್ಲಿ ಸಾಕಷ್ಟು ಟ್ರಾಫಿಕ್ ಆಗುತ್ತಿರುವುದರಿಂದ ಮತ್ತು ನಮ್ಮ ವಿಮಾನ ನಿಲ್ದಾಣವನ್ನು ವಿಸ್ತರಿಸಬೇಕಾಗಿರುವುದರಿಂದ ನಾನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಗ್ಗೆ ಚರ್ಚಿಸಿದ್ದೇನೆ” ಎಂದು ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next