Advertisement

ಮುರ್ಮು ಭೇಟಿ ಸಂದರ್ಭ ಗೈರು: ಬಿಜೆಪಿ ಶಾಸಕರಿಗೆ ನೋಟಿಸ್‌

11:39 PM Jul 16, 2022 | Team Udayavani |

ಬೆಂಗಳೂರು: ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಬೆಂಗಳೂರಿಗೆ ಆಗಮಿಸಿದ ಸಂದರ್ಭದಲ್ಲಿ ಗೈರು ಹಾಜರಾಗಿದ್ದ ಬಿಜೆಪಿ ಶಾಸಕರಿಗೆ ಕಾರಣ ಕೇಳಿ ನೋಟಿಸ್‌ ನೀಡಲಾಗಿದೆ.

Advertisement

ಮುರ್ಮು ಭೇಟಿ ಸಂದರ್ಭ ಪಕ್ಷದ ಎಲ್ಲ ಶಾಸಕರು ಹಾಗೂ ಸಂಸದರು ಹಾಜರಿರುವಂತೆ ಸೂಚನೆ ನೀಡಲಾಗಿತ್ತಾದರೂ 21 ಶಾಸಕರು ಗೈರು ಹಾಜರಾಗಿದ್ದರು. ಕೆಲವರು ಮುಂಚಿತ ವಾಗಿ ಅನುಮತಿ ಪಡೆದಿ ದ್ದರು. ಇತರರಿಗೆ ನೋಟಿಸ್‌ ನೀಡಲಾ ಗಿದೆ ಎಂದು ತಿಳಿದು ಬಂದಿದೆ.

ಮತದಾನ ತರಬೇತಿ
ಮತದಾನ ಮಾಡಲು ಬಿಜೆಪಿ ಶಾಸಕರಿಗೆ ತರಬೇತಿ ನೀಡಲು ತೀರ್ಮಾನಿಸಿದೆ. ಅದಕ್ಕಾಗಿ ಶಾಸಕ ರನ್ನು ಶನಿವಾರ (ಜು. 16) ಸಂಜೆಯೇ ಬೆಂಗಳೂರಿನ ಹೊಟೇಲ್‌ಗೆ ಕರೆಸಲಾಗಿದ್ದು, ರವಿವಾರ ಇಡೀ ದಿನ ತರಬೇತಿ ನೀಡಲಾಗುವುದು. ಸೋಮವಾರ ಹೊಟೇಲ್‌ನಿಂದಲೇ ಮತದಾನಕ್ಕೆ ಕರೆದುಕೊಂಡು ಹೋಗಲಾಗುವುದು.

ಬೆಂಗಳೂರಲ್ಲಿ ಮತ
ಹಾಕಲಿರುವ ಶ್ರೀನಿವಾಸ ಪ್ರಸಾದ್‌ ಚಾಮರಾಜನಗರ ಸಂಸದ ವಿ. ಶ್ರೀನಿವಾಸ ಪ್ರಸಾದ್‌ ಅನಾರೋಗ್ಯದ ಕಾರಣ ಬೆಂಗಳೂರಿನಲ್ಲೇ ಮತದಾನ ಮಾಡಲಿದ್ದು, ಸ್ಪೀಕರ್‌ ಕಚೇರಿಯಿಂದ ಅನುಮತಿ ಪಡೆದಿದ್ದಾರೆ ಎನ್ನಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next