Advertisement

ವಿಐಎಸ್ಎಲ್ ವಿಚಾರದಲ್ಲಿ ರಾಜಕೀಯ ಬೆಳೆಸುವ ಅವಶ್ಯಕತೆ ಇಲ್ಲ: ಸಿಎಂ ಬೊಮ್ಮಾಯಿ

04:15 PM Feb 08, 2023 | Team Udayavani |

ಶಿವಮೊಗ್ಗ:ವಿಐಎಸ್ಎಲ್ ವಿಚಾರದಲ್ಲಿ ರಾಜಕೀಯ ಬೆಳೆಸುವ ಅವಶ್ಯಕತೆ ಇಲ್ಲ ಎಂದು ಸಿಎಂ ಬಸವರಾಜ್ ಬೊಮ್ಮಯಿ ಅವರು ಬುಧವಾರ ವಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.

Advertisement

ಹೆಲಿಪ್ಯಾಡ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಶಿವಮೊಗ್ಗ ದಲ್ಲಿ ವಿವಿಧ ಕಾರ್ಯಕ್ರಮ‌ ಉದ್ಘಾಟನೆ ಗೆ ಬಂದಿದ್ದೇನೆ,ವಿಐಎಸ್ಎಲ್ ಅವರ ನಿಯೋಗ ನನ್ನ‌ ಬಳಿ ಬಂದಿತ್ತು. ಕೇಂದ್ರದ ಸಚಿವರಿಗೂ ಕೂಡ ಮಾಹಿತಿ ರವಾನೆ ಮಾಡಲಾಗಿದೆ. ಇದೇ ವಾರದಲ್ಲಿ ಸಭೆ ಕರೆಯುತ್ತೇನೆ. ಖಾಸಗಿ ಯವರ ಜೊತೆ ಕೂಡ ಮಾತನಾಡುತ್ತೇನೆ. ಪರಿಹಾರ ಕೊಡುವಂತಹ ಕೆಲಸವನ್ನು ಮಾಡುತ್ತೇವೆ. ಎಲ್ಲಾ ವಿವರಗಳೊಂದಿಗೆ ಬೆಂಗಳೂರಿನ ಲ್ಲಿ ಸಭೆ ಕರೆದು ಕೆಲ ನಿರ್ಣಯ ತೆಗೆದುಕೊಂಡು ಕೇಂದ್ರಕ್ಕೆ ಕಳುಹಿಸುಸುತ್ತೆವೆ. ಮ್ಮ ಮನವಿ ಸ್ವೀಕರಿಸಿ ಒಪ್ಪಿಗೆ ನೀಡುತ್ತಾರೆ ಎಂದು ಒಂದು ನಂಬಿಕೆ ಇದೆ. ಈ ವಿಚಾರದಲ್ಲಿ ರಾಜಕೀಯ ಬೆಳೆಸುವ ಅವಶ್ಯಕತೆ ಇಲ್ಲ ಎಂದರು.

ಇದನ್ನೂ ಓದಿ : ವಿಐಎಸ್ಎಲ್ ವಿಚಾರದಲ್ಲಿ ಬಿಜೆಪಿಯವರು ಕೊಟ್ಟ ಮಾತು ಉಳಿಸಿಕೊಂಡಿಲ್ಲ: ಡಿ.ಕೆ. ಶಿವಕುಮಾರ್

ಬ್ರಾಹ್ಮಣ ಸಿಎಂ ವಿಚಾರ ದ ಬಗ್ಗೆ ಪ್ರತಿಕ್ರಿಯಿಸಿ, ನಾನು ಜಾತಿ ಆಧಾರಿತ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದಿಲ್ಲ.ಜನ ಜಾತಿ, ವೈಯಕ್ತಿಕತೆ ಮೇಲೆ ಕಿಮ್ಮತ್ತು ಕೊಡುವುದಿಲ್ಲ.ಇಂತಹ ಮಾತುಗಳಿಗೆ ಪ್ರತಿಕ್ರಿಯೆ ನೀಡುವ ಅವಶ್ಯಕತೆ ಇಲ್ಲ. ಜನ ನಮ್ಮ ಸಾಮರ್ಥ್ಯದ ಮೇಲೆ ಅಧಿಕಾರದ ಆಧಾರದ ಮೇಲೆ ಮತ ಹಾಕುತ್ತಾರೆ. ಮತದಾರರು ಈಗ ಪ್ರಬುದ್ದರಾಗಿದ್ದಾರೆ ಎಂದರು. ರಾಜ್ಯ ಬಜೆಟ್ ಬಗ್ಗೆ ಕಾದು ನೋಡಿ ಎಂದು ಈ ವೇಳೆ ಸಿಎಂ ಹೇಳಿದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next