Advertisement

CBI ಗೆ ಕೊಡುವ ಅಗತ್ಯವಿಲ್ಲ; ಅಂಜಲಿ ಪ್ರಕರಣ ಕೂಡ ಸಿಐಡಿಗೆ:ಡಾ.ಜಿ.ಪರಮೇಶ್ವರ್

07:53 PM May 20, 2024 | Team Udayavani |

ಹುಬ್ಬಳ್ಳಿ: ಅಂಜಲಿ ಅಂಬಿಗೇರ ಹತ್ಯೆ ಪ್ರಕರಣವನ್ನು ಕೂಡ ಸಿಐಡಿ ಗೆ ವಹಿಸಲಾಗುವುದು. ನಾಳೆಯೊಳಗೆ ಸರಕಾರದ ಅಧಿಕೃತ ಆದೇಶ ಹೊರಡಿಸಲಾಗುತ್ತದೆ. ನಮ್ಮ ಪೊಲೀಸರು ಸಮರ್ಥರಿದ್ದು, ಯಾವುದೇ ಕಾರಣಕ್ಕೂ ಈ ಪ್ರಕರಣಗಳನ್ನು ಸಿಬಿಐಗೆ ಕೊಡುವ ಅಗತ್ಯವಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸ್ಪಷ್ಟಪಡಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ನೇಹಾ ಪ್ರಕರಣವನ್ನು ಸಿಐಡಿ ತನಿಖೆ ಕೈಗೊಂಡಿದೆ. ಅಂಜಲಿ ಪ್ರಕರಣವನ್ನು ಕೂಡ ಸಿಐಡಿ ಗೆ ವರ್ಗಾಯಿಸಲಾಗುವುದು. ಸ್ಥಳೀಯ ಪೊಲೀಸರು ಕೂಡ ಸಮರ್ಥರಿದ್ದು, ತನಿಖೆ ನಿಷ್ಪಕ್ಷಪಾತವಾಗಿ ನಡೆಯಬೇಕು ಎನ್ನುವ ಕಾರಣಕ್ಕೆ ಎರಡು ಪ್ರಕರಣಗಳನ್ನು ಸಿಐಡಿ ಗೆ ವಹಿಸಲಾಗಿದೆ. ಈ ಎರಡು ಹತ್ಯೆಗಳು ದುರದೃಷ್ಟಕರ. ಮಾನವೀಯತೆ ಹಾಗೂ ಕಾನೂನಾತ್ಮಕವಾಗಿ ಎರಡು ಕುಟುಂಬದ ಸದಸ್ಯರನ್ನು ಭೇಟಿಯಾಗಿ ಮಾತನಾಡಿದ್ದೇನೆ. ನಾನು ತಡವಾಗಿ ಬಂದಿದ್ದಾರೆ ಎನ್ನುವ ಆರೋಪ ಮಾಡುತ್ತಿದ್ದಾರೆ. ಆದರೆ ಕಾನೂನು ಮತ್ತು ನಿಯಮಗಳ ಪ್ರಕಾರ ಘಟನೆ ನಡೆದ ತತ್ ಕ್ಷಣ ಗೃಹ ಸಚಿವರು ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ನಗರದಲ್ಲಿ ನಡೆದ ಎರಡು ಪ್ರಕರಣಗಳ ಹಿನ್ನೆಲೆಯಲ್ಲಿ ಡಿಸಿಪಿ, ಹಾಗೂ ಕರ್ತವ್ಯ ಲೋಪ ಎಸಗಿದ ಠಾಣಾ ಇನಸ್ಪೆಕ್ಟರ್ ಮತ್ತು ಇನ್ನೋರ್ವ ಸಿಬ್ಬಂದಿಯನ್ನು ಅಮಾನತ್ತು ಮಾಡಲಾಗಿದೆ. ಇವರ ವಿರುದ್ಧವೂ ಕೂಡ ಇಲಾಖೆ ವಿಚಾರಣೆ ನಡೆಯಲಿದೆ. ಈ ಎರಡು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ ಅಧಿಕಾರಿ ಹಾಗೂ ಸಿಬ್ಬಂದಿ ನ್ಯೂನ್ಯತೆ ಕಂಡುಬಂದರೆ ಅವರ ವಿರುದ್ಧವೂ ಕೂಡ ಕ್ರಮ ಜರುಗಿಸಲಾಗುವುದು ಎಂದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎನ್ನುವುದು ಬಿಜೆಪಿ ಹಾಗೂ ಜೆಡಿಎಸ್ ನವರ ರಾಜಕೀಯ ಹೇಳಿಕೆ. ನಮ್ಮ ಅಧಿಕಾರದ ಅವಧಿಯ ಕಳೆದ ನಾಲ್ಕು ತಿಂಗಳಲ್ಲಿ 430 ಅಂದಿದ್ದಾರೆ. ಅವರ ಅವಧಿಯಲ್ಲಿನ ಅಂಕಿ ಅಂಶಗಳನ್ನು ನೋಡುವುದಾದರೆ 2021 ರ ಜನೇವರಿಯಿಂದ ಏಪ್ರಿಲ್ ವರೆಗೆ 449 ಕೊಲೆಗಳು ನಡೆದಿವೆ. 2022 ರ ಜನೇವರಿ -ಏಪ್ರಿಲ್ ವರೆಗೆ 466 ಕೊಲೆಗಳಾಗಿವೆ. 2023 ಜನೆವರಿ -ಏಪ್ರಿಲ್ ವರೆಗೆ 431 ಕೊಲೆ ನಡೆದಿವೆ. ಗಣಪತಿ ಉತ್ಸವ, ರಂಜಾನ್, ಹೋಳಿಯಂತಹ ವಿಶೇಷ ಸಂರ್ಭದಲ್ಲಿ ಗಲಾಟೆಯಾಗಿಲ್ಲ. ಎರಡು ಹಂತದ ಚುನಾವಣೆ ಶಾಂತಿಯುತವಾಗಿ ನಡೆದಿದೆ. ಒಂದು ವರ್ಷದಲ್ಲಿ ಒಂದೇ ಒಂದು ಕೋಮು ಗಲಭೆಯಾಗಿಲ್ಲ. ಕಾನೂನು ಸುವ್ಯವಸ್ಥೆ ಅರ್ಥ ಅವರಿಗೆ ಗೊತ್ತಿದೆಯಾ ಎಂದು ತಿರುಗೇಟು ನೀಡಿದರು.

ಯಾವ ಮಾಹಿತಿಯೂ ಬಂದಿಲ್ಲ
ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಬ್ಲೂಕಾರ್ನರ್ ನೋಟಿಸ್ ಜಾರಿ ಮಾಡಲಾಗಿದೆ.ಇಲ್ಲಿಯವರೆಗೂ ಇಂಟರ್‌ಪೋಲ್‌ನಿಂದ ಯಾವ ಮಾಹಿತಿ ಬಂದಿಲ್ಲ. ಮುಂದಿನ ಹಂತವಾಗಿ ಅವರ ಪಾಸ್‌ಪೋರ್ಟ್‌ರದ್ದುಪಡಿಸುವಂತೆ ವಾರಂಟ್ ಸಹಿತ ಪತ್ರ ಬರೆಯಲಾಗುವುದು ಎಂದು ತಿಳಿಸಿದರು.

Advertisement

ಇದೂವರೆಗೂ ಇಂತಹ ದೇಶದಲ್ಲಿದ್ದಾರೆ ಎನ್ನುವು ಕುರಿತು ಇಂಟರ್‌ಪೋಲ್ ಅಧಿಕೃತವಾಗಿ ತಿಳಿಸಿಲ್ಲ. ಈಗಾಗಲೇ ಎರಡ್ಮೂರು ನೋಟಿಸ್‌ಗಳನ್ನು ಜಾರಿ ಮಾಡಲಾಗಿದೆ. ಆದರೂ ಪ್ರಜ್ವಲ್ ರೇವಣ್ಣ ಬಂದಿಲ್ಲ. ಮುಂದಿನ ಹಂತದಲ್ಲಿ ಅವರ ಪಾಸ್‌ಪೋರ್ಟ್ ರದ್ದು ಪಡಿಸುವಂತೆ ಮನವಿ ಮಾಡಲಾಗುವುದು. ಈ ಕುರಿತು ಈಗಾಗಲೇ ಮುಖ್ಯಮಂತ್ರಿಗಳು ಪ್ರಧಾನಿಗಳಿಗೆ ಪತ್ರ ಬರೆದಿದ್ದಾರೆ. ರದ್ದು ಕೋರಿ ಕೋರ್ಟ್‌ನಿಂದ ಇಲಾಖೆಯು ವಾರಂಟ್ ಪಡೆದಿದ್ದು, ಇದನ್ನು ದೆಹಲಿ ಪಾಸ್‌ಪೋರ್ಟ್ ಕಚೇರಿಗೆ ಪಾರ್ಸ್ ಪೋರ್ಟ್ ರದ್ದು ಮಾಡುವಂತೆ ಪತ್ರ ಬರೆಯಲಾಗುವುದು. ಈ ವಾರಂಟ್‌ಗೆ ಅಧಿಕಾರಿಗಳು ಗೌರವ ಕೊಡಬೇಕಾಗುತ್ತದೆ. ಪಾಸ್‌ಪೋರ್ಟ್ ರದ್ದಾದರೆ ಯಾವುದೇ ದೇಶದವರು ಅವರನ್ನು ಇಟ್ಟುಕೊಳ್ಳುವುದಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next