Advertisement

ಮಾಲ್‌ಗೆ ಹೋಗೋ ಸೊಸೆ ಬೇಡ

02:04 AM Jun 13, 2017 | Team Udayavani |

ಪಟ್ನಾ: ‘ಮಾಲ್‌, ಚಿತ್ರ ಮಂದಿರಗಳಿಗೆ ಭೇಟಿ ನೀಡುವಂಥ ಹುಡುಗಿಯರ ಜತೆ ನನ್ನ ಮಕ್ಕಳ ಮದುವೆ ಮಾಡುವುದಿಲ್ಲ. ಅವರಿಗೆ ನನ್ನ ಹಾಗೇ ಇರುವ ಸುಸಂಸ್ಕೃತ, ಅಪ್ಪಟ ದೇಸಿ ಹುಡುಗಿಯನ್ನು ನೋಡಿ ಮದುವೆ ಮಾಡುತ್ತೇನೆ.’ ಹೀಗೆಂದು ಹೇಳಿರುವುದು ಬೇರಾರೂ ಅಲ್ಲ. ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ಡಿ ದೇವಿ. ಪತಿ, ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಯಾದವ್‌ರ 70ನೇ ಹುಟ್ಟು ಹಬ್ಬದ ಆಚರಣೆ ಸಂದರ್ಭದಲ್ಲಿ ರಾಬ್ಡಿ ತಮ್ಮ ಭಾವೀ ಸೊಸೆಯಂದಿರ ಬಗ್ಗೆ ಆಡಿದ ಮಾತುಗಳಿವು. ಬಿಹಾರದ ಸಚಿವರಾಗಿರುವ ತೇಜ್‌ ಪ್ರತಾಪ್‌ ಯಾದವ್‌ ಮತ್ತು ತೇಜಸ್ವಿ ಪ್ರಸಾದ್‌ ಯಾದವ್‌ಗೆ ಇನ್ನೂ ಮದುವೆಯಾಗಿಲ್ಲ. ಅವರನ್ನು ವಿವಾಹವಾಗಲು ಎಷ್ಟೋ ಯುವತಿಯರು ತಾಮುಂದು, ನಾಮುಂದು ಎಂದು ತುದಿಗಾಲಲ್ಲಿ ನಿಂತಿದ್ದಾರೆ.

Advertisement

ಆದರೆ, ಸೊಸೆಯರ ಬಗ್ಗೆ ಖಡಕ್ಕಾಗಿ ಮಾತನಾಡಿರುವ ಅತ್ತೆ ರಾಬ್ಡಿ ದೇವಿ, ‘ನನ್ನ ಮಕ್ಕಳನ್ನು ಮದುವೆಯಾಗುವ ಹುಡುಗಿ ಯರು ಜವಾಬ್ದಾರಿಯುತವಾಗಿ ಮನೆ ನಡೆಸಿಕೊಂಡು ಹೋಗಬೇಕು. ಹಿರಿಯರನ್ನು ಗೌರವಿಸುವ ಗುಣ ಹೊಂದಿರಬೇಕು. ನನ್ನ ಹಾಗೆ ಹೊರಗಿನ ಕೆಲಸಗಳನ್ನೂ ನಿಭಾಯಿಸ ಬೇಕು. ಅದರಲ್ಲೂ ತೇಜ್‌ ಪ್ರತಾಪ್‌ ಧಾರ್ಮಿಕ ವ್ಯಕ್ತಿ. ಆತನನ್ನು ಮದುವೆಯಾಗುವವಳು ಸುಸಂಸ್ಕೃತಳಾಗಿರಬೇಕು’ ಎಂದಿದ್ದಾರೆ. ಮಾಲ್‌ವೊಂದಕ್ಕೆ ಅಕ್ರಮವಾಗಿ ಜಾಗ ಪಡೆದಿರುವ ಹಗರಣದಲ್ಲಿ ಲಾಲು ಕುಟುಂಬ ಸಿಲುಕಿರುವಾಗಲೇ ರಾಬ್ಡಿ ಈ  ಹೇಳಿಕೆ ನೀಡಿರುವುದು ಹಾಸ್ಯಕ್ಕೆ ಎಡೆಮಾಡಿಕೊಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next