Advertisement

ವಿದೇಶಿ ಹೂಡಿಕೆದಾರರನ್ನು ಟಾರ್ಗೆಟ್‌ ಮಾಡಿಲ್ಲ

12:28 AM Jul 10, 2019 | mahesh |

ಹೊಸದಿಲ್ಲಿ: ಬಜೆಟ್‌ನಲ್ಲಿ ಶ್ರೀಮಂತರಿಗೆ ಹೆಚ್ಚುವರಿ ತೆರಿಗೆ ವಿಧಿಸಿದ್ದು ಭಾರತದ ಷೇರು ಮಾರುಕಟ್ಟೆ ಕುಸಿತಕ್ಕೆ ಕಾರಣ ಆಗುತ್ತಿದ್ದಂತೆಯೇ ಸ್ಪಷ್ಟನೆ ನೀಡಿರುವ ಹಣಕಾಸು ಸಚಿವಾಲಯವು, ವಿದೇಶಿ ಹೂಡಿಕೆದಾರರನ್ನು ಟಾರ್ಗೆಟ್‌ ಮಾಡಿಲ್ಲ. ತೆರಿಗೆಯಿಂದ ತಪ್ಪಿಸಿಕೊಳ್ಳಲು ವಿದೇಶಿ ಹೂಡಿಕೆದಾರರು ಕಾರ್ಪೊರೇಟ್‌ ಸಂಸ್ಥೆಯ ಮೂಲಕ ಹೂಡಿಕೆ ಮಾಡಬಹುದು.

Advertisement

ಆಗ ಅಂತಹ ವಿಭಾಗಕ್ಕೆ ಅನ್ವಯವಾಗುವ ವಿಭಾಗದಲ್ಲಿ ಕಡಿಮೆ ತೆರಿಗೆ ಅನ್ವಯವಾಗುತ್ತದೆ ಎಂದು ಸೂಚನೆ ನೀಡಿದೆ. ಹೆಚ್ಚು ವಹಿವಾಟು ಹೊಂದಿರುವವರ ಮೇಲೆ ಬಜೆಟ್‌ನಲ್ಲಿ ಮೇಲೆರಿಗೆ ವಿಧಿಸಲಾಗಿದ್ದು, ಇದರಿಂದಾಗಿ ಶೇ.40ರಷ್ಟು ವಿದೇಶಿ ಹೂಡಿಕೆದಾರರು ಈ ವಿಭಾಗಕ್ಕೆ ಒಳಪಡುತ್ತಾರೆ. ಹೀಗಾಗಿ ಮೇಲೆ¤ರಿಗೆ ತಪ್ಪಿಸಿಕೊಳ್ಳಲು ಈ ಹೂಡಿಕೆದಾರರು ಕಳೆದ ಕೆಲವು ದಿನಗಳಿಂದ ಹೂಡಿಕೆ ಹಿಂಪಡೆಯುತ್ತಿದ್ದರು. ಇದು ಮಾರುಕಟ್ಟೆ ಭಾರಿ ಕುಸಿತಕ್ಕೆ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next