Advertisement

ಟಿಆರ್‌ಪಿ ಕೇಸ್‌: ರಿಪಬ್ಲಿಕ್‌ಗೆ ಕ್ಲೀನ್‌ಚಿಟ್‌

10:40 PM Sep 22, 2022 | Team Udayavani |

ಮುಂಬೈ: 2020ರ ಟೆಲಿವಿಷನ್‌ ರೇಟಿಂಗ್‌ ಪಾಯಿಂಟ್ಸ್‌(ಟಿಆರ್‌ಪಿ) ಬದಲಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ನಾಬ್‌ ಗೋಸ್ವಾಮಿ ಅವರ ರಿಪಬ್ಲಿಕ್‌ ಸುದ್ದಿ ಸಂಸ್ಥೆಗೆ ಜಾರಿ ನಿರ್ದೇಶನಾಲಯ ಗುರುವಾರ ಕ್ಲೀನ್‌ ಚಿಟ್‌ ಕೊಟ್ಟಿದೆ. ಅದರೊಂದಿಗೆ ಆರ್‌ ಭಾರತ್‌ ಹೆಸರಿನ ವಾಹಿನಿಯನ್ನೂ ಆರೋಪ ಮುಕ್ತಗೊಳಿಸಲಾಗಿದೆ.

Advertisement

ಟಿಆರ್‌ಪಿ ಬದಲಾವಣೆಯಲ್ಲಿ ರಿಪಬ್ಲಿಕ್‌ ಮಾಧ್ಯಮ ಸಂಸ್ಥೆಯ ಕೈವಾಡವಿರುವುದಕ್ಕೆ ಯಾವುದೇ ಸಾಕ್ಷಿಯಿಲ್ಲ ಎಂದು ಜಾರಿ ನಿರ್ದೇಶನಾಲಯ ಹೇಳಿದೆ. ಇಂಡಿಯಾ ಟುಡೇ ವಿರುದ್ಧದ ಪ್ರಕರಣದ ತನಿಖೆ ಜಾರಿಯಲ್ಲಿದೆ.

ಅಪರಾಧ ಇಲಾಖೆಯು 2021ರ ಜೂನ್‌ನಲ್ಲಿ ಚಾರ್ಜ್‌ಶೀಟ್‌ ಸಲ್ಲಿಸಿದ್ದು, ಅದರಲ್ಲಿ ಅರ್ನಾಬ್‌ ಅವರನ್ನು ದೋಷಿ ಎಂದು ಕರೆದಿತ್ತು. ಜಾರಿ ನಿರ್ದೇಶನಾಲಯವು ಸೆ.15ರಂದು ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯಕ್ಕೆ(ಪಿಎಂಎಲ್‌ಎ) ಚಾರ್ಜ್‌ಶೀಟ್‌ ಸಲ್ಲಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next