Advertisement

lok sabha polls; ಟಿಕೆಟ್‌ ಘೋಷಣೆಗೂ ಮುನ್ನ ಭಾವನಾತ್ಮಕ ಮಾತು ಬೇಡ: ಶ್ರೀವತ್ಸ

09:17 PM Mar 12, 2024 | Team Udayavani |

ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಟಿಕೆಟ್‌ ಇನ್ನೂ ಘೋಷಣೆಯಾಗಿಲ್ಲ. ಟಿಕೆಟ್‌ ಘೋಷಣೆಗೂ ಮುನ್ನವೇ ಸಂಸದ ಪ್ರತಾಪಸಿಂಹ ಭಾವನಾತ್ಮಕವಾಗಿ ಹಾಗೂ ವಿಚಲಿತರಾಗಿ ಮಾತನಾಡುವುದು ಬೇಡ ಎಂದು ಶಾಸಕ ಟಿ.ಎಸ್‌. ಶ್ರೀವತ್ಸ ಸಲಹೆ ನೀಡಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರತಾಪ್‌ ಸಿಂಹ ಅವ ರಿಗೆ ಈಗಲೂ ಟಿಕೆಟ್‌ ಸಿಗಬಹುದು. ಹಾಗಾಗಿ ಆತಂಕಕ್ಕೆ ಒಳಗಾಗಿ ಮಾತಾಡುವುದನ್ನು ನಿಲ್ಲಿಸುವಂತೆ ಮನವಿ ಮಾಡುತ್ತೇನೆ ಎಂದರು. ಪ್ರತಾಪಸಿಂಹ ಅವರು ಕೇಂದ್ರದ ನಾಯಕರೊಂದಿಗೆ ಮಾತನಾಡಲು ಬೆಂಗಳೂರಿಗೆ ಹೋಗಿದ್ದಾರೆ. ಇನ್ನೂ ಚರ್ಚೆಗಳು ನಡೆಯುತ್ತಿವೆ. ಹೀಗಿರುವಾಗ ಭಾವನಾತ್ಮಕವಾಗಿ ಮಾತನಾಡಿದರೆ ಪಕ್ಷ ಮುಜುಗರ ಅನುಭವಿಸಬೇಕಾಗುತ್ತದೆ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next