Advertisement

Politics : ಖರ್ಗೆ ತವರು ರಾಜ್ಯದಲ್ಲೇ ಕರೆಂಟಿಲ್ಲ: ರಾಮ ರಾವ್‌

11:15 PM Oct 25, 2023 | |

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ರಾಜ್ಯ ಕರ್ನಾಟಕದಲ್ಲಿಯೇ ರೈತರಿಗೆ ಸಮರ್ಪಕವಾಗಿ ಪೂರೈಕೆ ಮಾಡಲು ವಿದ್ಯುತ್‌ ಇಲ್ಲ ಎಂದು ತೆಲಂಗಾಣ ಸಚಿವ ಕೆ.ಟಿ.ರಾಮರಾವ್‌ ಟೀಕಿಸಿದ್ದಾರೆ. ಖರ್ಗೆಯವರ ತವರು ರಾಜ್ಯದಲ್ಲಿಯೇ ರೈತರಿಗೆ ಸೂಕ್ತ ರೀತಿಯಲ್ಲಿ ವಿದ್ಯುತ್‌ ಪೂರೈಸಲು ಅಸಾಧ್ಯವಾದ ಕಾಂಗ್ರೆಸ್‌ ನಮ್ಮ ರಾಜ್ಯದ ಬಗ್ಗೆ ಮಾತನಾಡುತ್ತಿದೆ ಎಂದು ಆರೋಪಿಸಿದ್ದಾರೆ.

Advertisement

“ಖರ್ಗೆಯವರೇ ನಿಮ್ಮದೇ ರಾಜ್ಯದಲ್ಲಿ ಐದು ಗಂಟೆ ಕಾಲ ರೈತರಿಗೆ ವಿದ್ಯುತ್‌ ಪೂರೈಕೆ ಮಾಡಲಾಗುತ್ತಿಲ್ಲ. ಅಂಥವರು ಈ ರಾಜ್ಯದಲ್ಲಿ ಗೆದ್ದರೆ ಏನು ಮಾಡಲು ಸಾಧ್ಯ’ ಎಂದು ರಾಮರಾವ್‌ ಕೇಳಿದ್ದಾರೆ. ಅವಿಭಜಿತ ಆಂಧ್ರಪ್ರದೇಶದಲ್ಲಿ ಆ ಪಕ್ಷ ಅಧಿಕಾರದಲ್ಲಿದ್ದಾಗಲೂ ವಿದ್ಯುತ್‌ ನೀಡಲು ಅದಕ್ಕೆ ಸಾಧ್ಯವಾಗಲಿಲ್ಲ ಎಂದರು. ಹೈದರಾಬಾದ್‌ನಲ್ಲಿ ಮಾತನಾಡಿದ ರಾಮರಾವ್‌ ಕಾಂಗ್ರೆಸ್‌ ತೆಲಂಗಾಣದಲ್ಲಿ ಅಧಿಕಾರಕ್ಕೆ ಬಂದರೆ ರಾಜ್ಯದ ಪ್ರಗತಿಯ ದಾರಿ ಕುಸಿಯಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next