Advertisement

“ಬ್ರಿಟಿಷ್‌ ದೌರ್ಜನ್ಯದ ವಿರುದ್ಧ ಸಾಕ್ಷ್ಯಚಿತ್ರ ಏಕಿಲ್ಲ’: ಕೇರಳ ರಾಜ್ಯಪಾಲ

12:36 AM Jan 29, 2023 | Team Udayavani |

ಹೊಸದಿಲ್ಲಿ: ಬ್ರಿಟಿಷರು ದೇಶದಲ್ಲಿ ಆಡಳಿತ ನಡೆಸುತ್ತಿದ್ದ ವೇಳೆ ದೌರ್ಜನ್ಯ ಎಸಗಿದ್ದರ ವಿರುದ್ಧ ಏಕೆ ಸಾಕ್ಷ್ಯಚಿತ್ರಗಳು ನಿರ್ಮಾಣವಾಗುತ್ತಿಲ್ಲ. ಭಾರತ ಅಭಿವೃದ್ಧಿ ಹೊಂದುತ್ತಿರುವುದನ್ನು ನೋಡಲು ಕೆಲವು ದೇಶಗಳಿಗೆ ಸಹಿಸಲಾಗುತ್ತಿಲ್ಲ. ಅದಕ್ಕೆ ಪೂರಕವಾಗಿ ಈ ಬೆಳವಣಿಗೆ ನಡೆದಿದೆ ಎಂದು ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್‌ ಖಾನ್‌ ಆರೋಪಿಸಿದ್ದಾರೆ.

Advertisement

ನಮ್ಮ ದೇಶದವರೇ ಕೆಲವರು ನಮ್ಮ ನ್ಯಾಯಾಂಗ ವ್ಯವಸ್ಥೆ ನೀಡಿದ ತೀರ್ಪಿಗಿಂತ ಬಿಬಿಸಿಯ ಸಾಕ್ಷ್ಯಚಿತ್ರವನ್ನು ನಂಬುತ್ತಿರುವುದು ವಿಷಾದನೀಯ ಎಂದು ರಾಜ್ಯಪಾಲರು ಹೇಳಿದ್ದಾರೆ.

ತನಿಖೆಗೆ ಸಮಿತಿ: ದಿಲ್ಲಿ ವಿ.ವಿ. ಆವರಣದಲ್ಲಿ ಸಾಕ್ಷ್ಯಚಿತ್ರ ಪ್ರದರ್ಶನ ಯತ್ನ ವಿವಾದಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಏಳು ಸದಸ್ಯರ ಸಮಿತಿ ರಚಿಸಲು ತೀರ್ಮಾನಿಸಲಾಗಿದೆ. ಈ ಬಗ್ಗೆ ದಿಲ್ಲಿ ವಿ.ವಿ.ಯ ರಜಿನಿ ಅಬಿಬಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next