Advertisement

ಸೂಕ್ಷ್ಮವಲಯಗಳ ಜನರ ಸ್ಥಳಾಂತರವಿಲ್ಲ: ಸಚಿವ ಅಶ್ವಿ‌ನಿ ಕುಮಾರ್‌ ಚೌಬೆ

11:52 PM Jan 13, 2023 | Team Udayavani |

ತಿರುವನಂತಪುರ: ಕೇರಳದ ಪರಿಸರ ಸೂಕ್ಷ್ಮವಲಯಗಳ ಸಂರಕ್ಷಣೆಗಾಗಿ ಸಿದ್ದಪಡಿಸಿರುವ ವರದಿಯಲ್ಲಿ ಆ ವಲಯಗಳಲ್ಲಿ ವಾಸಿಸುತ್ತಿರುವ ಜನರ ಸ್ಥಳಾಂತರ ಮಾಡುವುದಿಲ್ಲ. ಜತೆಗೆ ಅವರ ವೃತ್ತಿಯ ಮೇಲೆ ಪರಿಣಾಮ ಬೀರುವ ಯಾವುದೇ ಅಂಶಗಳಿಲ್ಲ ಎಂದು ಕೇಂದ್ರ ಸರಕಾರ ಸ್ಪಷ್ಟ ಪಡಿಸಿದೆ.

Advertisement

ಸಂಸತ್‌ನ ಚಳಿಗಾಲದ ಅಧಿವೇಶನದಲ್ಲಿ ವಡಕರ ಕ್ಷೇತ್ರದ ಸಂಸದ ಕೆ.ಮುರಳೀಧರನ್‌ ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ್ದ ಕೇಂದ್ರ ಪರಿಸರ ಮತ್ತು ಅರಣ್ಯ ಖಾತೆ ಸಹಾಯಕ ಸಚಿವ ಅಶ್ವಿ‌ನಿ ಕುಮಾರ್‌ ಚೌಬೆ ಉತ್ತರಿಸಿ ಸದ್ಯ ಕೈಗೊಂಡಿರುವ ಕೃಷಿ ಚಟುವಟಿಕೆಗಗಳಿಗೆ ಯಾವುದೇ ರೀತಿಯ ಸಮಸ್ಯೆ ಇಲ್ಲ. ಹೈನುಗಾರಿಕೆ, ಕೃಷಿ, ಮೀನುಗಾರಿಕೆ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳಲು ಅವಕಾಶ ಇದೆ ಎಂದು ಉತ್ತರದಲ್ಲಿ ತಿಳಿಸಿದ್ದಾರೆ.

ಗಣಿಗಾರಿಕೆ ಸಹಿತ ವಾಣಿಜ್ಯ ಸಂಬಂಧಿತ ಚಟುವಟಿಕೆಗಳಿಗೆ ಮಾತ್ರ ನಿರ್ಬಂಧವಿದೆ ಎಂದು ಅವರು ಹೇಳಿದ್ದಾರೆ. ಸಂರಕ್ಷಿತ ಅರಣ್ಯ ಹಾಗೂ ಅಭಯಾರಣ್ಯಗಳ ಸುತ್ತಲಿನ ಪ್ರದೇಶದಲ್ಲಿ ಹೆಚ್ಚುತ್ತಿರುವ ಚಟುವಟಿಕೆಗಳನ್ನು ಗ್ರಹಿಸಿ, ಕೇರಳ ಸ್ಟೇಟ್‌ ರಿಮೋಟ್‌ ಎನ್ವಿರಾನ್‌ಮೆಂಟ್‌ ಸೆಂಟರ್‌ ಸ್ಯಾಟಲೈಟ್‌ ಸರ್ವೇ ವರದಿಯನ್ನು ಸಿದ್ಧಪಡಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next