Advertisement

ಭ್ರಷ್ಟಾಚಾರ ಬೇಡ: ಪೋಪ್‌ ಎಚ್ಚರಿಕೆ

11:52 PM Jun 03, 2023 | Team Udayavani |

ವ್ಯಾಟಿಕನ್‌ ಸಿಟಿ: ಅಭಿವೃದ್ಧಿ ಹೊಂದಿದ ಜಗತ್ತಿನಲ್ಲಿ ಅಧ್ಯಾತ್ಮದ ಸಾರವನ್ನು, ಸೇವೆಯನ್ನು ಪಸರಿಸುವುದು ಕ್ರೈಸ್ತ ಮಿಷನರಿಗಳ ಉದ್ದೇಶವಾಗಬೇಕೇ ವಿನಃ ಸೇವೆಯನ್ನೂ ಉದ್ಯಮ ಮಾಡಿಕೊಳ್ಳಕೂಡದು. ಮಿಶನರಿಗಳ ಕಾರ್ಯಾಚರಣೆಯಲ್ಲಿ ಭ್ರಷ್ಟಾಚಾರ ಸುಳಿಯದಂತೆ ನೋಡಿಕೊಳ್ಳಿ ಎಂದು ಪೋಪ್‌ ಫ್ರಾನ್ಸಿಸ್‌ ಎಚ್ಚರಿಕೆ ನೀಡಿದ್ದಾರೆ.

Advertisement

ಮಿಷನರಿಗಳು ಚರ್ಚ್‌ಗಳ ನಿರ್ಮಾಣಕ್ಕೆ, ಪಾದ್ರಿಗಳ ತರಬೇತಿಗೆ ಸಂಗ್ರಹಿಸುತ್ತಿರುವ ಹಣವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದಾಗಿ ಅಮೆರಿಕದ ಕ್ರೈಸ್ತ ಮಿಷನರಿ ಶಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಅಸೋಸಿಯೇಟೆಡ್‌ ಪ್ರಸ್‌ ತನಿಖಾ ವರದಿ ಬಹಿರಂಗಗೊಳಿಸಿದ್ದ ಬೆನ್ನಲ್ಲೇ ಪೋಪ್‌ ಈ ಹೇಳಿಕೆ ನೀಡಿದ್ದಾರೆ. ವ್ಯಾಟಿಕನ್‌ ಫಾಂಟಿಫಿಕಲ್‌ ಮಿಷನರಿ ಸೊಸೈಟಿಗಳ ಸಭೆಯಲ್ಲಿ ಪೋಪ್‌ ಈ ಎಚ್ಚರಿಕೆ ರವಾನಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next