Advertisement

“ಜನಾರ್ದನ ರೆಡ್ಡಿ ಸ್ಪರ್ಧೆ ಇಲ್ಲ’: ಸೋಮಶೇಖರ ರೆಡ್ಡಿ

11:01 PM Sep 27, 2022 | Team Udayavani |

ಬಳ್ಳಾರಿ: ಮಾಜಿ ಸಚಿವ ಜನಾರ್ದನ ರೆಡ್ಡಿ ಮುಂದಿನ ಬಾರಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸು ವುದಿಲ್ಲ ಎಂದು ನಗರ ಶಾಸಕ ಜಿ. ಸೋಮಶೇಖರ ರೆಡ್ಡಿ ಹೇಳಿದರು.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಎಐಸಿಸಿ ಮುಖಂಡ ರಾಹುಲ್‌ ಗಾಂಧಿ  ಒಂದು ರೀತಿ “ಐರನ್‌ ಲೆಗ್‌’ ಇದ್ದಂತೆ. ಅವರು ಬಳ್ಳಾರಿಗೆ ಬಂದರೆ ಕಾಂಗ್ರೆಸ್‌ ಪಕ್ಷಕ್ಕೆ ಸೋಲು ಖಚಿತ. ಅವರು ಕಳೆದ ಬಾರಿಯೂ ಬಳ್ಳಾರಿಗೆ ಬಂದಿದ್ದರು. ಆಗಲೂ ಕಾಂಗ್ರೆಸ್‌ ಸೋತಿತ್ತು ಎಂದರು.

ಶಾಸಕ ನಾಗೇಂದ್ರ ಅವರೇ ಬಿಜೆಪಿ ಯಿಂದ ಕಾಂಗ್ರೆಸ್‌ಗೆ ಹೋದವರು. ಈಗ ಅವರು ಬಿಜೆಪಿ ಸಚಿವರನ್ನು ಯಾಕೆ ಕಾಂಗ್ರೆಸ್‌ಗೆ ಆಹ್ವಾನಿಸುತ್ತಾರೊ ಅರ್ಥ ವಾಗುತ್ತಿಲ್ಲ. ಜಿಲ್ಲೆಯ 3-4 ಕಾಂಗ್ರೆಸ್‌ ಶಾಸಕರು ಬಿಜೆಪಿ ಸೇರುವ ಸಾಧ್ಯತೆಯಿದೆ.

ಮುಂದಿನ ಚುನಾವಣೆಯೊಳಗೆ ಅಥವಾ ರಾಹುಲ್‌ ಗಾಂಧಿ ಪಾದಯಾತ್ರೆಯೊಳಗೆ ಆ ಶಾಸಕರು ಬಿಜೆಪಿಗೆ ಬರಲು ಸಿದ್ಧರಿದ್ದಾರೆ ಎಂದು ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next