Advertisement

ಜಾತಿ, ಧರ್ಮ, ಭಾಷೆಯ ಮಧ್ಯೆ ಸ್ಪರ್ಧೆ ಅಲ್ಲ: ಹರಿಪ್ರಸಾದ್‌

12:35 AM Apr 04, 2024 | Team Udayavani |

ಮಂಗಳೂರು: ದಕ್ಷಿಣ ಕನ್ನಡ, ಉಡುಪಿಯಲ್ಲಿ ಯಾವುದೇ ಜಾತಿ, ಧರ್ಮ, ಭಾಷೆಗಳ ಮಧ್ಯೆ ಸ್ಪರ್ಧೆ ನಡೆಯುತ್ತಿಲ್ಲ. ಸಂವಿಧಾನ ಉಳಿಸುವ ಆಶಯದ ಚುನಾವಣೆ ಮಾತ್ರ ನಡೆಯುತ್ತಿದೆ ಎಂದು ವಿಧಾನ ಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌ ಹೇಳಿದರು.

Advertisement

ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಐದು ವರ್ಷದ ಬಳಿಕವೂ ಚುನಾವಣೆ ನಡೆಯಬೇಕು ಎಂದಾದರೆ ಸಂವಿಧಾನ, ಪ್ರಜಾಪ್ರಭುತ್ವ ಉಳಿಸಲು ಕಾಂಗ್ರೆಸ್‌ ಗೆಲ್ಲಬೇಕಿದೆ. ಅದಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಮರ್ಥ ಹೊಸ ಅಭ್ಯರ್ಥಿ ವಕೀಲ ಪದ್ಮರಾಜ್‌ ಅವರನ್ನು ಕಣಕ್ಕಿಳಿಸಲಾಗಿದೆ ಎಂದರು.

ಈ ಜಿಲ್ಲೆ ಯಾವ ಹಿಂದುತ್ವದ ಭದ್ರಕೋಟೆಯೂ ಅಲ್ಲ. ಸಾವರ್ಕರ್‌ ಸ್ಥಾಪಿಸಿದ್ದ ಮಹಾರಾಷ್ಟ್ರದಲ್ಲೇ ಹಿಂದುತ್ವದ ಭದ್ರಕೋಟೆ ಇಲ್ಲ. ಎಂಥೆಂತ ಕೋಟೆಗಳು ಮುರಿದು ಬಿದ್ದಿವೆ. ರಾಜ ಮಹಾರಾಜರ ಕೋಟೆಗಳು ಪಾಳು ಬಿದ್ದಿವೆ. ಇಲ್ಲೂ ಹಾಗಾಗುತ್ತದೆ. ಮೋದಿ ಹೇಳುವಂತೆ ದೇಶ ವಿಭಜಿಸುವ ಕೆಲಸ ನಾವು ಮಾಡಿಲ್ಲ. ದೇಶ ಕಟ್ಟುವ ಕೆಲಸ ಮಾಡುತ್ತಿದ್ದೇವೆ ಎಂದು ಅವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next