Advertisement

ಇನ್ನೆರಡು ತಿಂಗಳು ಸಮಾರಂಭಗಳು ಬೇಡ : ಶಾಸಕ ಡಾ|ಯತೀಂದ್ರ ಸಿದ್ದರಾಮಯ್ಯ 

01:11 AM Apr 18, 2021 | Team Udayavani |

ವರುಣಾ ಕ್ಷೇತ್ರದಲ್ಲಿ ಈ ವರಗೆ ಅಂಕೆ ಮೀರಿ ಕೊರೊನಾ ಪ್ರಕರಣಗಳು ವರದಿಯಾಗಿಲ್ಲ. ಎಲ್ಲರೂ ಕಡ್ಡಾಯವಾಗಿ ವ್ಯಾಕ್ಸಿನ್‌ ಪಡೆಯಬೇಕು. ಲಸಿಕೆ ಪಡೆದರೂ ಕೊರೊನಾ ಬರಬಹುದು, ಆದರೆ ಲಸಿಕೆ ಪಡೆದವರ ಮೇಲೆ ದುಷ್ಪರಿಣಾಮ ಬೀರುವುದಿಲ್ಲ. ಹೀಗಾಗಿ ರಾಜ್ಯದ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬೇಕು ಮತ್ತು ಮಾಸ್ಕ್ ಅನ್ನು ಕಡ್ಡಾಯವಾಗಿ ಧರಿಸಬೇಕು. ಈ ಮೂಲಕ ಎಲ್ಲರೂ ಕೊರೊನಾದ ಗಂಭೀರತೆಯಿಂದ ಪಾರಾಗಬಹುದು.

Advertisement

ರಾಜ್ಯ ಸರಕಾರ ತತ್‌ಕ್ಷಣ ಕಾಲೇಜು ಸೇರಿದಂತೆ ಸಿನೆಮಾ ಮಂದಿರ, ಮಾಲ್‌, ಮಾರ್ಕೆಟ್‌, ಸಂತೆ, ಛತ್ರ ಸೇರಿದಂತೆ ಸಭೆ ಸಮಾರಂಭಗಳನ್ನು ಮುಲಾಜಿಲ್ಲದೆ ಬಂದ್‌ ಮಾಡಲಿ. ಯಾವುದೇ ಸಭೆ ಸಮಾರಂಭಗಳಿಗೆ ಇನ್ನೆರಡು ತಿಂಗಳು ಅವಕಾಶ ನೀಡಬಾರದು. ಮದುವೆಗಳಿಗೆ 200 ಜನರ ಬದಲು ಕೇವಲ 50 ಜನರಿಗೆ ಮಾತ್ರ ಅವಕಾಶ ಕೊಡಬೇಕು. ಜತೆಗೆ ಕೊರೊನಾ ನೆಗೆಟಿವ್‌ ಇದ್ದವರಿಗೆ ಮಾತ್ರ ಮದುವೆಯಲ್ಲಿ ಭಾಗಿಯಾಗುವಂತೆ ಮಾಡಬೇಕು. ಯಾವುದೇ ಕಾಟಾಚಾರದ ಕ್ರಮಗಳು ಈ ಸಂದರ್ಭದಲ್ಲಿ ಪ್ರಯೋಜನಕ್ಕೆ ಬರಲಾರದು.

ಕೊರೊನಾ ಹಾಟ್‌ ಸ್ಪಾಟ್‌ ಗುರುತಿಸಿ ರೋಗಿಗಳಿಗೆ ಹಾಸಿಗೆ, ಔಷಧ ಮತ್ತು ಆಕ್ಸಿಜಿನ್‌ ಕಾಯ್ದಿರಿಸಬೇಕು. ಇನ್ನೆರಡು ತಿಂಗಳ ಕಾಲದ ರೋಗಿಗಳ ನಿಖರವಾದ ಅಂದಾಜು ಮಾಡಿ ಅವರ ಶುಶ್ರೂಷೆಗೆ ಎಲ್ಲ ರೀತಿಯ ವ್ಯವಸ್ಥೆ ಮಾಡಬೇಕು. ಇವೆಲ್ಲದಕ್ಕಿಂತ ಕಳೆದ ಬಾರಿ ಕೊರೊನಾ ಗಂಭೀರತೆ ನೋಡಿದ್ದರೂ, ನಮ್ಮ ಸರಕಾರ ಪಾಠ ಕಲಿತಂತೆ ಕಾಣಿಸುತ್ತಿಲ್ಲ.

ಅಕ್ಕ ಪಕ್ಕದ ರಾಜ್ಯಗಳಿಂದ ಆಗಮಿಸುವವರನ್ನು ಗಡಿಯಲ್ಲೇ ಪರಿಕ್ಷಿಸಿ ಅವರನ್ನು ಒಳ ಬರಮಾಡಿಕೊಳ್ಳುವ ವ್ಯವಸ್ಥೆ ಆಗಬೇಕು. ಹಾಗೆಯೇ ಕೊರೊನಾ ಹೆಚ್ಚಾಗಿರುವ ನಗರಗಳಿಂದ ಹೊರಹೋಗುವವರಿಗೂ ಇದು ಅನ್ವಯವಾಗಬೇಕು. ಕೊರೊನಾ ಪಾಸಿಟಿವ್‌ ಬಂದಿದ್ದರೂ, ರೋಗಲಕ್ಷಣಗಳಿಲ್ಲದವರಿಗೆ ಹೋಂ ಐಸೋಲೇಶನ್‌ ವ್ಯವಸ್ಥೆ ಕಲ್ಪಿಸಿ ಮನೆಯಿಂದ ಅವರು ಹೊರಬಾರದಂತೆ ನೋಡಿಕೊಳ್ಳಬೇಕು. ಕೇವಲ ಸರಕಾರದಿಂದ ಮಾತ್ರ ಕೊರೊನಾ ನಿಯಂತ್ರಣ ಸಾಧ್ಯವಿಲ್ಲ. ಸರಕಾರ ಹೇಳಿದ ಕ್ರಮಗಳನ್ನು ಜನರೂ ಚಾಚೂ ತಪ್ಪದೇ ಪಾಲಿಸಿದಾಗ ಮಾತ್ರ ಈ ಮಹಾಮಾರಿಯ ನಿಯಂತ್ರಣ ಸಾಧ್ಯ.

ಕೊರೊನಾ 2ನೇ ಅಲೆ ಪ್ರಬಲವಾಗಿ ಅಪ್ಪಳಿಸುತ್ತದೆ ಎಂಬ ಅರಿವಿದ್ದರೂ, ಅದರ ನಿಯಂತ್ರಣಕ್ಕೆ ಸರಕಾರ ಮನಗೊಡದೆ ಮಾಲ್‌. ಸಿನೆಮಾ ಮಂದಿರ, ಛತ್ರ, ಜಾತ್ರೆ ಹಬ್ಬಗಳಿಗೆ ಅವಕಾಶ ನೀಡಿದ್ದೂ ಅಲ್ಲದೆ ವಿವಿಧ ಪಕ್ಷಗಳ ರಾಜಕೀಯದ ಸಭೆಗೂ ಸಹ ಅನುಮತಿ ನೀಡಿ ಭಾರೀ ತಪ್ಪು ಮಾಡಿತು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next