Advertisement

ದೇವೇಗೌಡರು ಪ್ರಧಾನಿಯಾಗಿದ್ದಾಗ ಕಾಶ್ಮೀರದಲ್ಲಿ ಬ್ಲಾಸ್ಟ್‌ ನಡೆದಿರಲಿಲ್ಲ: ಕುಮಾರಸ್ವಾಮಿ

09:03 AM Apr 20, 2019 | Sathish malya |

ಹುಬ್ಬಳ್ಳಿ : “ಪಿಎಂ ಮೋದಿ ಹೇಳುತ್ತಾರೆ : ನಾನು ದೇಶಪ್ರೇಮಿ ಅಲ್ಲ ಅಂತ; ದೇಶಪ್ರೇಮವನ್ನು ನಾನು ಮೋದಿ ಅವರಿಂದ ಕಲಿಯಬೇಕಾಗಿಲ್ಲ. ದೇವೇಗೌಡರು ದೇಶದ ಪ್ರಧಾನಿಯಾಗಿದ್ದಾಗ ಕಾಶ್ಮೀರದಲ್ಲಿ ಒಂದೇ ಒಂದು ಬ್ಲಾಸ್ಟ್‌ ಆಗಿರಲಿಲ್ಲ. ಇದು ನಮ್ಮ ಪರಂಪರೆ. ಆದುದರಿಂದ ನೀವು ನನ್ನನ್ನು ಬ್ರಾಂಡ್‌ ಮಾಡಬೇಡಿ; ನಿಮಗೆ ಆ ಹಕ್ಕಿಲ್ಲ’ ಎಂದು ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ, ಪ್ರಧಾನಿ ಮೋದಿಗೆ ತಿರುಗೇಟು ನೀಡಿದ್ದಾರೆ.

Advertisement

ಎರಡು ದಿನಗಳ ಹಿಂದಷ್ಟೇ ನಡೆದಿದ್ದ ರಾಲಿಯಲ್ಲಿ ಮಾತನಾಡುತ್ತಾ  ಮೋದಿ ಅವರು, ಕರ್ನಾಟಕದಲ್ಲಿನ ಕಾಂಗ್ರೆಸ್‌ – ಜೆಡಿಎಸ್‌ ಮೈತ್ರಿ ಕೂಟದ ವೋಟ್‌ ಬ್ಯಾಂಕ್‌ ಪಾಕಿಸ್ಥಾನದ ಬಾಲಾಕೋಟ್‌ನಲ್ಲಿದೆಯಾ ? ಎಂದು ಪ್ರಶ್ನಿಸಿದ್ದರು.

‘ಕಳೆದ ಬಾರಿಯ ಲೋಕಸಭಾ ಚುನಾವಣೆಯ ವೇಳೆ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಭ್ರಷ್ಟಾಚಾರ ಮುಕ್ತ ಸರಕಾರವನ್ನು ನೀಡುವೆವು ಎಂದು ಹೇಳಿತ್ತು. ಹಾಗಿದ್ದರೆ ಮೋದಿ ಅವರು ಟೀ ಮಾರಿಕೊಂಡು ಪಕ್ಷವನ್ನು ಶ್ರೀಮಂತಗೊಳಿಸಿದರಾ ? ಭ್ರಷ್ಟಾಚಾರ ಮುಕ್ತ ಬಿಜೆಪಿ ಸರಕಾರ ಎನ್ನುವುದು ಕೇವಲ ಫೇಕ್‌’ ಎಂದು ಕುಮಾರಸ್ವಾಮಿ ಹೇಳಿದರು.

‘ಕಾರವಾರದಲ್ಲಿ ಒಬ್ಬ ಬಿಜೆಪಿ ನಾಯಕನಿಂದ 78 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ. ಈ ಹಣ ಎಲ್ಲಿಂದ ಬಂತು ?’ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು. ಮೋದಿ ಅವರು ಕರ್ನಾಟದಲ್ಲಿನ ಕಾಂಗ್ರೆಸ್‌ – ಜೆಡಿಎಸ್‌ ಮೈತ್ರಿ ಸರಕಾರದ್ದು ಕೊನೆಯಿಲ್ಲದ ಡ್ರಾಮಾ ಎಂದು ಲೇವಡಿ ಮಾಡಿದ್ದರು. ಇದಕ್ಕೆ ಉತ್ತರವಾಗಿ ಕುಮಾರಸ್ವಾಮಿ ತಮ್ಮ ದೋಸ್ತಿ ಸರಕಾರ ಮಜಬೂತ್‌ ಸರಕಾರ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next