Advertisement

ಟ್ಯಾಂಕರ್‌ಗಳ ವಿರುದ್ಧ ಕ್ರಮ ಇಲ್ಲ: ಸವದಿ

11:11 PM Mar 17, 2020 | Team Udayavani |

ವಿಧಾನಸಭೆ: ಕೃಷಿ ಚಟುವಟಿಕೆಗಳಿಗೆ ಉಪಯೋಗಿಸುವ ಟ್ಯಾಂಕರ್‌ಗಳ ವಿರುದ್ಧ ಕ್ರಮ ಕೈಗೊಳ್ಳದಂತೆ ಆಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಸಾರಿಗೆ ಸಚಿವರೂ ಆದ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.

Advertisement

ಕೆ.ವೈ. ನಂಜೇಗೌಡ, ಕೆ.ಎಸ್‌.ಲಿಂಗೇಶ್‌, ವೆಂಕಟರಾವ್‌ ನಾಡಗೌಡ ಅವರ ಪ್ರಸ್ತಾಪಕ್ಕೆ ಉತ್ತರಿಸಿ, ಕೆಲವು ಗುತ್ತಿಗೆದಾರರು ಟ್ರಾಕ್ಟರ್‌ಗಳಿಗೆ ನೀರಿನ ಟ್ಯಾಂಕರ್‌ ಜೋಡಿಸಿ ರಸ್ತೆ ಕಾಮಗಾರಿ ಸೇರಿ ಇತರೆ ಕೆಲಸಗಳಿಗೆ ಬಳಕೆ ಮಾಡುತ್ತಿದ್ದಾರೆ. ಇನ್ನು ಕೆಲವು ಕಡೆ ನೀರು ಮಾರಾಟ ಮಾಡುತ್ತಿರುವ ಪ್ರಕರಣಗಳಿವೆ. ಆದರೆ, ಕೃಷಿ ಬಳಕೆಗೆ ಉಪಯೋಗಿಸಿದರೆ ಕ್ರಮ ಕೈಗೊಳ್ಳದಂತೆ ನಿರ್ದೇಶನ ನೀಡಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next