Advertisement

ಇನ್ನೂ ನಡೆಯದ ಸುರತ್ಕಲ್‌ ಟೋಲ್‌ಗೇಟ್‌ ವಿಲೀನ : ಸೆ. 13ರಂದು ಸಾಮೂಹಿಕ ಧರಣಿ

09:39 AM Sep 11, 2022 | Team Udayavani |

ಸುರತ್ಕಲ್‌: ಎನ್‌ಐಟಿಕೆ ಬಳಿಯ ಟೋಲ್‌ ಗೇಟನ್ನು ಸಮೀಪದ ಹೆಜಮಾಡಿಯಲ್ಲಿರುವ ಗೇಟ್‌ನೊಂದಿಗೆ ವಿಲೀನ ಮಾಡಲು ಕೇಂದ್ರದ ಹೆದ್ದಾರಿ ಪ್ರಾಧಿಕಾರ ಮುಂದಾಗಿದ್ದರೂ ದಿನಾಂಕ ಪ್ರಕಟಿಸದೆ ವಿಳಂಬ ಧೋರಣೆ ತೋರು ತ್ತಿರುವುದನ್ನು ಖಂಡಿಸಿ ಸುರತ್ಕಲ್‌ ಟೋಲ್‌ ಗೇಟ್‌ ಹೋರಾಟ ಸಮಿತಿ ಸೆ. 13ರಂದು ಸಾಮೂಹಿಕ ಧರಣಿಗೆ ಮುಂದಾಗಿದೆ.

Advertisement

ಕೇಂದ್ರದ ಪ್ರಾಧಿಕಾರ ವಿಲೀನಕ್ಕೆ ಹಸುರು ನಿಶಾನೆ ತೋರಿರುವ ಬಗ್ಗೆ ಸಂಸದ ನಳಿನ್‌ ಕುಮಾರ್‌ ದೃಢಪಡಿಸಿದ್ದಾರೆ. ಆದರೆ ಯಾವುದೇ ಬೆಳವಣಿಗೆ ಆಗಿಲ್ಲ.

ಅಭಯಚಂದ್ರ ಜೈನ್‌, ವಿನಯ ಕುಮಾರ್‌ ಸೊರಕೆ, ಮಿಥುನ್‌ ರೈ ಮತ್ತಿತ ರರು ಈ ಹಿಂದಿನ ಹೋರಾಟದಲ್ಲಿ ಭಾಗಿ ಯಾಗಿದ್ದರು. ವಿವಿಧ ವಾಹನ ಚಾಲಕ- ಮಾಲಕರ ಸಂಘಟನೆಗಳು ಸೆ. 13ರ ಧರಣಿಯಲ್ಲಿ ಭಾಗವಹಿಸಲು ನಿರ್ಧರಿಸಿವೆ ಎಂದು ಹೋರಾಟ ಸಮಿತಿ ತಿಳಿಸಿದೆ.

ಇದನ್ನೂ ಓದಿ : ಇಂಡೋನೇಷ್ಯಾದಲ್ಲಿ 7.6 ತೀವ್ರತೆಯ ಭೂಕಂಪ, ಹಲವು ಕಟ್ಟಡಗಳಿಗೆ ಹಾನಿ ; ಸುನಾಮಿ ಎಚ್ಚರಿಕೆ

Advertisement

Udayavani is now on Telegram. Click here to join our channel and stay updated with the latest news.

Next