Advertisement

ಅಧಿಕ ಲಾಭಾಂಶ ನೀಡುವುದಾಗಿ ಹಣ ಪಡೆದು ಎನ್ ಐಟಿಕೆ ವಿದ್ಯಾರ್ಥಿಯಿಂದ 27.96 ಲ.ರೂ ವಂಚನೆ

08:58 PM Mar 29, 2023 | Team Udayavani |

ಮಂಗಳೂರು: ಅಧಿಕ ಲಾಭ ನೀಡುವುದಾಗಿ ಹಣ ಪಡೆದು ವಂಚಿಸಿರುವ ಬಗ್ಗೆೆ ಸುರತ್ಕಲ್ ಎನ್‌ಐಟಿಕೆ ವಿದ್ಯಾರ್ಥಿಯ ವಿರುದ್ಧ ಪ್ರಕರಣ ದಾಖಲಾಗಿದೆ.

Advertisement

4ನೇ ವರ್ಷದ ವಿದ್ಯಾರ್ಥಿ ಯಶ್‌ವರ್ಧನ್ ಜೈನ್ ಆಲಿಯಾಸ್ ವೈವಿಜೆ 2022ರ ಮಾರ್ಚ್‌ನಿಂದ ವಾಟ್ಸಪ್ ಗ್ರೂಪ್‌ನಲ್ಲಿ ಎನ್‌ಐಟಿಕೆ ವಿದ್ಯಾರ್ಥಿಗಳಿಗೆ ಒಂದು ವಾರದಲ್ಲಿ ಶೇ.10ರಷ್ಟು ಅಧಿಕ ಲಾಭ ನೀಡುವುದಾಗಿ ಭರವಸೆ ನೀಡಿ ಹಣ ಪಡೆದಿದ್ದ. ಅಕ್ಟೋಬರ್ ತಿಂಗಳಿನಲ್ಲಿ ದೇಶದಾದ್ಯಂತ ಜನರನ್ನು ವಂಚಿಸುವುದಕ್ಕಾಗಿ ‘ವೈವಿಜೆ ಇನ್‌ವೆಸ್‌ಟ್‌‌ಮೆಂಟ್ ಎಂಟರ್‌ಪ್ರೈಸಸ್’ ಎಂಬ ಹೆಸರಿನ ಟೆಲಿಗ್ರಾಂ ಗ್ರೂಪ್ ಮಾಡಿದ್ದ. ಆ ಗ್ರೂಪ್ ಪ್ರಸ್ತುತ 981 ಮಂದಿ ಸದಸ್ಯರನ್ನು ಹೊಂದಿದೆ. ಅದರಲ್ಲಿ ಹೆಚ್ಚಾಗಿ ಎನ್‌ಐಟಿಕೆ ವಿದ್ಯಾರ್ಥಿಗಳು ಹಾಗೂ ಇತರ ಕೆಲವು ಕಾಲೇಜಿನ ವಿದ್ಯಾರ್ಥಿಗಳಿದ್ದಾರೆ.

ಎನ್‌ಐಟಿಕೆಯ ವಿದ್ಯಾರ್ಥಿಗಳು 2022ರ ಜೂ.26ರಿಂದ 2023ರ ಜ.3ರವರೆಗೆ ಹಂತ ಹಂತವಾಗಿ 27.96 ಲ.ರೂ.ಗಳನ್ನು ಆರೋಪಿ ಯಶ್‌ವರ್ಧನ್ ಜೈನ್‌ನ ಖಾತೆಗೆ ಪಾವತಿಸಿದ್ದಾರೆ. ಆರಂಭದಲ್ಲಿ ಅವರ ವಿಶ್ವಾಸಗಳಿಸಲು ಆರೋಪಿ 1 ತಿಂಗಳ ಕಾಲ ಹೂಡಿಕೆಯ ಮೇಲೆ ಲಾಭಾಂಶ ನೀಡಿದ್ದ. ಅನಂತರ ಯಾವುದೇ ಹಣ ನೀಡಿಲ್ಲ. ಈ ಬಗ್ಗೆೆ ವಿದ್ಯಾರ್ಥಿಗಳು ಮಂಗಳೂರಿನ ಸೆನ್ ಪೊಲೀಸ್ ಠಾಣೆಗೆ ನೀಡಿರುವ ದೂರಿನಂತೆ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಧರ್ಮಸ್ಥಳ: ಲಾರಿ- ಬೈಕ್ ಡಿಕ್ಕಿ: ಓರ್ವ ಸಾವು, ಮತ್ತೋರ್ವ ಗಂಭೀರ

Advertisement

Udayavani is now on Telegram. Click here to join our channel and stay updated with the latest news.

Next