Advertisement

ನಿತೀಶ್‌ ವಂಚಕ; ಜನರನ್ನು ಮೂರ್ಖರನ್ನಾಗಿಸಿದ್ದಾರೆ: ಆರ್‌ಜೆಡಿ ನಾಯಕ

04:46 PM Jun 24, 2017 | Team Udayavani |

ಪಟ್ನಾ : “ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ ರಾಮನಾಥ ಕೋವಿಂದ ಅವರಿಗೆ ಬೆಂಬಲ ಸೂಚಿಸುವ ಮೂಲಕ ಭಾರೀ ದೊಡ್ಡ ಪ್ರಮಾದ ಎಸಗಿರುವ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು “ಒಬ್ಬ ವಂಚಕ’ ಎಂದು ಆರ್‌ಜೆಡಿ ನಾಯಕ ಭಾಯಿ ವೀರೇಂದ್ರ ಕಿಡಿ ಕಾರಿದ್ದಾರೆ.

Advertisement

“ನಿತೀಶ್‌ ಜೀ ಅವರು ಪ್ರತಿಯೋರ್ವ ವ್ಯಕ್ತಿಯನ್ನು ವಂಚಿಸಿರುವವರಲ್ಲಿ ಒಬ್ಬರಾಗಿದ್ದಾರೆ. ಆತ ಜನರನ್ನು ಯಾವತ್ತೂ ಮೂರ್ಖರನ್ನಾಗಿ ಮಾಡುತ್ತಾ ಬಂದಿದ್ದಾರೆ’ ಎಂದು ಭಾಯಿ ವೀರೇಂದ್ರ ಹೇಳಿದರು. 

ನಿತೀಶ್‌ ಕುಮಾರ್‌ ಅವರಿಗೆ ಬಿಹಾರದ ಜನರು ಎಂದೂ ಕ್ಷಮಿಸುವುದಿಲ್ಲ ಎಂದು ವೀರೇಂದ್ರ ಗುಡುಗಿದರು. 

“ಈಗ ಬಿಹಾರದ ಓರ್ವ ಪುತ್ರಿಯನ್ನು (ಮೀರಾ ಕುಮಾರ್‌) ರಾಷ್ಟ್ರಪತಿ ಅಭ್ಯರ್ಥಿಯಾಗಿ ಹೆಸರಿಸಲಾಗಿದೆ. ನಿತೀಶ್‌ ಸ್ವಲ್ಪ ಕಾಯಬೇಕಿತ್ತು ಮತ್ತು ಆಲೋಚಿಸಬೇಕಿತ್ತು. ಆತ ನಿಜಕ್ಕೂ ದೊಡ್ಡ ಪ್ರಮಾದ ಎಸಗಿದ್ದಾರೆ ಮತ್ತು ಅದಕ್ಕೆ ಅವರು ಬೆಲೆ ತೆರಬೇಕಾಗುತ್ತದೆ’ ಎಂದು ವೀರೇಂದ್ರ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next