Advertisement

ಜಾತಿ ಗಣತಿಗೆ ನಿತೀಶ್‌ ಕುಮಾರ್‌ ಸರಕಾರ ನಿರ್ಧಾರ

01:14 AM Jun 02, 2022 | Team Udayavani |

ಪಟ್ನಾ: ಬಿಹಾರದಲ್ಲಿ ಈ ವರ್ಷ ಜಾತಿಗಣತಿ ನಡೆಸುವುದಾಗಿ ಅಲ್ಲಿನ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ತಿಳಿಸಿದ್ದಾರೆ.

Advertisement

ಸಾಂಪ್ರದಾಯಿಕವಾಗಿ ನಡೆಸಲಾಗುತ್ತಿದ್ದ ಜನಗಣತಿಯ ಬದಲಿಗೆ, ಜಾತಿ ವಾರು ಆಧಾರದಲ್ಲಿ ಜನರ ಸಂಖ್ಯೆಯನ್ನು ದಾಖಲಿ ಸಲಾಗುತ್ತದೆ ಎಂದು ಅವರು ಗುರುವಾರ ಕರೆಯಲಾಗಿದ್ದ ಸರ್ವಪಕ್ಷಗಳ ಸಭೆಯಲ್ಲಿ ತಿಳಿಸಿದ್ದಾರೆ.

ಸಭೆಯ ಅನಂತರ ಸುದ್ದಿಗಾರರೊಂದಿಗೆ ಮಾತ ನಾಡಿದ ನಿತೀಶ್‌, ನಿಜಹೇಳಬೇಕೆಂದರೆ ಜಾತಿ ಗಣತಿಯಡಿ, ಜಾತಿವಾರು ಜನಸಂಖ್ಯೆ

ದಾಖಲಿಸಲಾಗುತ್ತದೆ. ಇದರಿಂದ, ಯಾವ ಜಾತಿ ಯವರು ಎಷ್ಟು ಅಭಿವೃದ್ಧಿ ಸಾಧಿಸಿದ್ದಾರೆಂಬುದು ತಿಳಿಯುತ್ತದೆ ಎಂದಿದ್ದಾರೆ.

ಜಾತಿಗಣತಿಯನ್ನು ಬೇಗನೇ ಮಾಡಿ ಮುಗಿಸುವ ಉದ್ದೇಶ ಹೊಂದಿರುವುದಾಗಿ ಸರ್ವಪಕ್ಷ ಸಭೆಯಲ್ಲಿ ನಿತೀಶ್‌ ತಿಳಿಸಿದರಾದರೂ, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌, ಹಬ್ಬಗಳ ಕಾಲ ಮುಗಿದ ಅನಂತರ ಜಾತಿ ಗಣತಿ ನಡೆಸುವಂತೆ ಸಲಹೆ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next