Advertisement

ರಾಜ್ಯದ ಹಲವು ಹೆದ್ದಾರಿಗಳ ಉನ್ನತೀಕರಣ: ನಿತಿನ್‌ ಗಡ್ಕರಿ

10:15 PM Mar 23, 2023 | Team Udayavani |

ನವದೆಹಲಿ: ಕರ್ನಾಟಕದ ಹೊನ್ನಾವರ-ಕಿತ್ತೂರು ರಾಷ್ಟ್ರೀಯ ಹೆದ್ದಾರಿ ಸೇರಿ ಹಲವು ಹೆದ್ದಾರಿಗಳನ್ನು ಉನ್ನತೀಕರಿಸಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ತಿಳಿಸಿದ್ದಾರೆ.

Advertisement

ಈ ಕುರಿತು ಟ್ವೀಟ್‌ ಮಾಡಿರುವ ಅವರು, “653 ಕೋಟಿ ರೂ. ವೆಚ್ಚದಲ್ಲಿ ಎನ್‌ಎಚ್‌-69, ಬೆಂಗಳೂರು-ಚಿತ್ತೂರು ಮಾರ್ಗವನ್ನು ನಾಲ್ಕು ಪಥದ ರಸ್ತೆಯಾಗಿ ಅಭಿವೃದ್ಧಿಪಡಿಸಲಾಗುವುದು. ಸಿಂದಿಗೇರಿ-ಬಳ್ಳಾರಿ ರಸ್ತೆ ವಿಸ್ತರಣೆಗೆ 120.5 ಕೋಟಿ ರೂ. ಮೀಸಲಿಡಲಾಗಿದೆ. ಎನ್‌-150 ಎ ಮಾರ್ಗದಲ್ಲಿ 19.8 ಕಿ.ಮೀ. ರಸ್ತೆ ವಿಸ್ತರಣೆಯಾಗಲಿದೆ,’ ಎಂದು ಹೇಳಿದ್ದಾರೆ.

“142 ಕೋಟಿ ರೂ. ವೆಚ್ಚದಲ್ಲಿ ರಾಯಚೂರು ಜಿಲ್ಲೆಯ ವೆಂಕಟೇಶ್ವರ ಕ್ಯಾಂಪ್‌ನಿಂದ ದಡೆಸೊಗೂರು ಕ್ಯಾಂಪ್‌ ರಸ್ತೆವರೆಗೆ ಮಾರ್ಗ ಅಭಿವೃದ್ಧಿಪಡಿಸಲಾಗುವುದು. ಅಲ್ಲದೇ 2022-23ನೇ ಸಾಲಿನಲ್ಲಿ ಎಕ್ಸ್‌ಪ್ರೆಸ್‌ ಕಾರಿಡಾರ್‌ ಮಾದರಿಯಲ್ಲಿ 6,910 ಕಿ.ಮೀ. ಉದ್ದದ ರಸ್ತೆ ಅಭಿವೃದ್ಧಿಪಡಿಸಲಾಗುವುದು’ ಎಂದು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next