Advertisement

ನಿರ್ಭಯಾ ಕೇಸ್‌: ಹ್ಯಾಂಗ್‌ಮ್ಯಾನ್‌ಗೆ ಜಗ್ಗೇಶ್‌ 1 ಲಕ್ಷ ದೇಣಿಗೆ

11:16 AM Mar 22, 2020 | Lakshmi GovindaRaj |

ಇತ್ತೀಚೆಗಷ್ಟೇ ಜಗ್ಗೇಶ್‌ ಅಂಧ ಸಹೋದರಿಯರಿಗೆ ಮನೆ ನಿರ್ಮಿಸಿ ಕೊಡುವ ಮೂಲಕ ತಮ್ಮ ಮಾತು ಉಳಿಸಿಕೊಂಡಿದ್ದರು. ಈಗ ಮತ್ತೂಂದು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ. ಹೌದು, ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 7 ವರ್ಷಗಳ ನಂತರ ನಿರ್ಭಯಾ ಹಂತಕರನ್ನು ಶುಕ್ರವಾರ ಗಲ್ಲಿಗೇರಿಸಿದ ಹ್ಯಾಂಗ್‌ಮ್ಯಾನ್‌ಗೆ 1 ಲಕ್ಷ ದೇಣಿಗೆ ನೀಡಿದ್ದಾರೆ.

Advertisement

ಅಷ್ಟಕ್ಕೂ ಜಗ್ಗೇಶ್‌ ನಿರ್ಭಯಾ ಹಂತಕರನ್ನು ನೇಣಿಗೇರಿಸಿದ ಹ್ಯಾಂಗ್‌ಮ್ಯಾನ್‌ಗೆ 1 ಲಕ್ಷ ಕೊಟ್ಟಿದ್ದು ಯಾಕೆ? ಈ ಪ್ರಶ್ನೆಗೆ ಉತ್ತರ, ನಿರ್ಭಯಾ ಹಂತಕರನ್ನು ಗಲ್ಲಿಗೇರಿಸಿದ ನಂತರ ಸಿಗುವ ಒಂದು ಲಕ್ಷ ರುಪಾಯಿ ಸಂಭಾವನೆಯಿಂದ ತನ್ನ ಮಗಳ ಮದುವೆ ಮಾಡುವುದಾಗಿ ಹ್ಯಾಂಗ್‌ಮ್ಯಾನ್‌ ಪವನ್‌ ಜಲ್ಲಾದ್‌ ಹೇಳಿದ್ದರು. ಆ ವಿಷಯ ತಿಳಿಯುತ್ತಿದ್ದಂತೆಯೇ, ಜಗ್ಗೇಶ್‌ ಕೂಡ ಟ್ವೀಟ್‌ ಮಾಡಿ, “ಮಾನ್ಯರೆ ರಾಕ್ಷಸರ ಸಂಹಾರ ದೇವರ ನಿಯಮ! ಆ ಕಾರ್ಯದಿಂದ ಬರುವ ಹಣದಲ್ಲಿ ಮಗಳ ಮದುವೆ ಮಾಡುವೆ ಎಂದ ನಿಮ್ಮ ಅನಿಸಿಕೆ ಕೇಳಿ ಭಾವುಕನಾದೆ,

ನೀವೇ ಆ ಪಾಪಿಗಳ ನೇಣಿಗೇರಿಸಿದರೆ, ನಾನು ಕಲೆಯಿಂದ ದುಡಿದ ಒಂದು ಲಕ್ಷ ರೂಪಾಯಿಯನ್ನು ನಿಮಗೆ ದೇಣಿಗೆಯಾಗಿ ನಿಮ್ಮ ಮಗಳ ಮದುವೆಗೆ ನೀಡುವೆ. ಇಂದೇ ಆ ಹಣವನ್ನು ನಿಮಗಾಗಿ ಮೀಸಲಿಟ್ಟೆ. ಇದು ದುರುಳ ನಿಗ್ರಹ ದೇವರ ಸೇವೆ. ಹರಿ ಓಂ’ ಎಂದು ಜಗ್ಗೇಶ್‌ ಟ್ವೀಟ್‌ ಮಾಡಿದ್ದರು. ಶುಕ್ರವಾರ ಅತ್ಯಾಚಾರಿಗಳ ನೇಣಿಗೇರಿಸಲಾಗುತ್ತೆ ಎಂಬ ವಿಷಯ ತಿಳಿಯುತ್ತಿದ್ದಂತೆ ಜಗ್ಗೇಶ್‌, ಈ ಸುದ್ದಿ ಕೇಳಲು ರಾತ್ರಿಯೆಲ್ಲ ನಿದ್ದೆ ಮಾಡದೆ ಎದ್ದು ಕೂತಿದ್ದ ಅವರು,

ಆ ನಾಲ್ವರು ಅತ್ಯಾಚಾರಿಗಳನ್ನು ಗಲ್ಲಿಗೇರಿಸುತ್ತಿದ್ದಂತೆಯೇ ಅವರು ಹಿಂದೆ ಮಾತು ಕೊಟ್ಟಂತೆ 1 ಲಕ್ಷ ರು.ದೇಣಿಗೆ ನೀಡಿ, “ಕೊಟ್ಟ ಮಾತಿನಂತೆ 1 ಲಕ್ಷ ರು. ನಿರ್ಭಯ ಹಂತಕರ ಹ್ಯಾಂಗ್‌ಮ್ಯಾನ್‌ಗೆ ನನ್ನ ದೇಣಿಗೆ. ದೇವನೊಬ್ಬನಿರುವ ಅವ ಎಲ್ಲ ನೋಡುತಿರುವ. ಸತ್ಯದ ಹಾದಿಯಲ್ಲಿ ನಡೆದವಗೆ ಭಯವಿಲ್ಲ. ಅಸತ್ಯದ ಮಾರ್ಗಕ್ಕೆ ಶಿಕ್ಷೆ ತಪ್ಪಲ್ಲಾ. ಈ ದಿನಕ್ಕೆ ಕಾಯುತ್ತಿದ್ದೆ. ಸುದ್ದಿ ಕೇಳಲು ನಿದ್ರೆ ಮಾಡದೆ ಕಾದೆ. ಹರಿ ಓಂ. ಶುಭದಿನ’ ಎಂದು ಟ್ವೀಟ್‌ ಮಾಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next