Advertisement

ನಿರಂಜನ್‌ ಕಿಲಾಡಿ ಕನಸು

11:34 AM Oct 06, 2018 | |

ನಿರಂಜನ್‌ ಶೆಟ್ಟಿ ಚಿತ್ರರಂಗಕ್ಕೆ ಬಂದು ಅನೇಕ ವರ್ಷಗಳಾಗಿದೆ. ಆದರೆ, ಅವರಿಗೆ ಹೇಳಿಕೊಳ್ಳುವಂತಹ ಗೆಲುವು ಸಿಕ್ಕಿಲ್ಲ. ಪ್ರತಿ ಸಿನಿಮಾದ ಮೇಲೆ ನಿರೀಕ್ಷೆಯಿಂದ ಕಾಯುತ್ತಲೇ ಬಂದಿರುವ ನಿರಂಜನ್‌ಗೆ ಈ ಬಾರಿ ಕಿಲಾಡಿ ತನ್ನ ಕೈ ಹಿಡಿಯುವ ವಿಶ್ವಾಸವಿದೆ. ಹಾಗಾಗಿಯೇ ಕಿಲಾಡಿಯ ಬರುವಿಕೆಗಾಗಿ ನಿರಂಜನ್‌ ಎದುರು ನೋಡುತ್ತಿದ್ದಾರೆ. ಎಲ್ಲಾ ಓಕೆ, ನಿರಂಜನ್‌ ಯಾವ ಕಿಲಾಡಿಯನ್ನು ನಂಬಿಕೊಂಡಿದ್ದಾರೆಂದು ನೀವು ಕೇಳಬಹುದು.

Advertisement

ಅದು “ಜಗತ್‌ ಕಿಲಾಡಿ’. ನಿರಂಜನ್‌ ಶೆಟ್ಟಿ “ಜಗತ್‌ ಕಿಲಾಡಿ’ ಎಂಬ ಸಿನಿಮಾದಲ್ಲಿ ನಟಿಸಿದ್ದು, ಈಗ ಬಿಡುಗಡೆಯ ಹಂತಕ್ಕೆ ಬಂದಿದೆ. ಸಿನಿಮಾ ನೋಡಿದ ಸೆನ್ಸಾರ್‌ ಮಂಡಳಿ “ಯು/ಎ’ ಪ್ರಮಾಣ ಪತ್ರ ನೀಡಿದೆ. ಅಂದಹಾಗೆ, “ಜಗತ್‌ ಕಿಲಾಡಿ’ ತಮಿಳು ಚಿತ್ರ “ಚದುರಂಗವೈಟ್ಟೈ’ ರೀಮೇಕ್‌. “ತುಂಬಾ ದಿನಗಳ ನಂತರ ಒಳ್ಳೆಯ ಕಥೆ ಸಿಕ್ಕಿದೆ. ಈ ತರಹದ ಸ್ಕ್ರಿಪ್ಟ್ ಸಿಗೋದು ಅಪರೂಪ.

ಅಂತಹ ಸ್ಕ್ರಿಪ್ಟ್ ಮಾಡಿದ ಮೂಲ ಕಥೆಗಾರರನ್ನು ನಾವು ನೆನಪಿಸಿಕೊಳ್ಳಲೇಬೇಕು. ಈ ಚಿತ್ರದಲ್ಲಿ ನಟಿಸಿದ್ದು ನನ್ನ ಪುಣ್ಯ’ ಎಂದು ಖುಷಿಯಾದರು ನಿರಂಜನ್‌. ಚಿತ್ರದಲ್ಲಿ ನಿರಂಜನ್‌ ಸುಮಾರು 15 ಗೆಟಪ್‌ಗ್ಳಲ್ಲಿ ಕಾಣಿಸಿಕೊಂಡಿದ್ದಾರಂತೆ. ಇಲ್ಲಿ ಥ್ರಿಲ್ಲರ್‌ ಅಂಶಗಳ ಜೊತೆಗೆ ತಾಯಿ ಸೆಂಟಿಮೆಂಟ್‌ ಕೂಡಾ ಇದೆ ಎಂದರು. ಈ ಚಿತ್ರವನ್ನು ಲಯನ್‌ ರಮೇಶ್‌ ಬಾಬು ನಿರ್ಮಿಸಿದ್ದಾರೆ. ನಿರಂಜನ್‌ ಶೆಟ್ಟಿ ತಂದುಕೊಟ್ಟ ಸುಮಾರು 15 ಸಿಡಿಗಳನ್ನು ನೋಡಿದ ನಿರ್ಮಾಪಕರು, “ಚದುರಂಗವೆಟ್ಟೈ’ ಚಿತ್ರವನ್ನು ಮಾಡಲು ಮುಂದಾದರಂತೆ.

ಈ ಚಿತ್ರವನ್ನು ಅರವಿಂದ್‌ ಧೀರೇಂದ್ರ ನಿರ್ದೇಶಿಸಿದ್ದಾರೆ. ಸಿನಿಮಾದ ಎಲ್ಲಾ ಜವಾಬ್ದಾರಿಗಳನ್ನೂ ನಿರಂಜನ್‌ ವಹಿಸಿಕೊಂಡಿದ್ದರಿಂದ, ಅರವಿಂದ್‌ ಒಂದು ಶೆಡ್ನೂಲ್‌ ಮುಗಿದ ನಂತರ ನಿರ್ಮಾಪಕರನ್ನು ಭೇಟಿಯಾದರಂತೆ. ಚಿತ್ರದಲ್ಲಿ ರವಿ ಚೇತನ್‌ ಕೂಡಾ ಪ್ರಮುಖ ಪಾತ್ರ ಮಾಡಿದ್ದಾರೆ. ಚಿತ್ರಕ್ಕೆ ಗಿರಿಧರ್‌ ದಿವಾನ್‌ ಸಂಗೀತ ನೀಡಿದ್ದಾರೆ. ಸದ್ಯದಲ್ಲೇ ಚಿತ್ರ ಬಿಡುಗಡೆಯಾಗಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next