Advertisement

ಹವಾಲಾ: ಮಂಜೇಶ್ವರದಲ್ಲಿ ಎನ್‌ಐಎ ತನಿಖೆ

12:54 AM Mar 07, 2023 | Team Udayavani |

ಮಂಜೇಶ್ವರ: ದಿಲ್ಲಿಯನ್ನು ಕೇಂದ್ರೀಕರಿಸಿ ನಡೆದ ಕೋಟ್ಯಾಂತರ ರೂ.ಗಳ ಹವಾವಾ ವ್ಯವಹಾರಗಳ ಕುರಿತಾದ ತನಿಖೆಯ ಅಂಗವಾಗಿ ಎನ್‌ಐಎ ತಂಡ ಮಂಜೇಶ್ವರಕ್ಕೆ ಆಗಮಿಸಿದೆ.

Advertisement

ಪ್ರಕರಣಕ್ಕೆ ಸಂಬಂಧಿಸಿ ಇತ್ತೀಚೆಗೆ ಬೆಂಗಳೂರಿನಲ್ಲಿ ಪ್ರಧಾನ ಆರೋಪಿಗಳಲ್ಲಿ ಒಬ್ಬನಾದ ಯುವಕನನ್ನು ಬಂಧಿಸಲಾಗಿತ್ತು. ಈತನಿಂದ ಲಭಿಸಿದ ಮಾಹಿತಿಯ ಆಧಾರದಲ್ಲಿ ತನಿಖಾ ತಂಡ ಆಗಮಿಸಿದೆ. ಮಂಜೇಶ್ವರ ಪೊಲೀಸ್‌ ಠಾಣೆ ವ್ಯಾಪ್ತಿಯ ನಿವಾಸಿ ವ್ಯಕ್ತಿಯೊಬ್ಬನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ. ಆದರೆ ಆತನ ಕುರಿತಾದ ಯಾವುದೇ ಮಾಹಿತಿಗಳನ್ನು ತನಿಖಾ ತಂಡ ಬಹಿರಂಗಪಡಿಸಿಲ್ಲ.

ಇದೇ ವೇಳೆ ಮತ್ತೂಂದು ತಂಡ ಮಾ. 5ರಂದು ಕೊಚ್ಚಿ ತಲುಪಿದ್ದು, ಎರಡು ಕಡೆಗಳಲ್ಲಿ ದಾಳಿ ನಡೆಸಿದೆ. ಪಿಎಫ್ಐಗೆ ಸಂಬಂಧಿಸಿ ಈ ದಾಳಿ ನಡೆದಿದೆ. ಎಡವನಕ್ಕಾಡ್‌, ಪಳಂಙಾಡ್‌ ನಿವಾಸಿ ಪೈಂಟಿಂಗ್‌ ಕಾರ್ಮಿಕ ಇಶಾìದ್‌ನನ್ನು ವಶಕ್ಕೆ ತೆಗೆದುಕೊಂಡಿದೆ. ಈ ಹಿಂದೆ ಬಂಧಿತನಾದ ಪಿಎಫ್ಐಯ ಆಯುಧ ತರಬೇತುದಾರ ಮುಹಮ್ಮದ್‌ ಮುಬಾರಕ್‌ನ ಎಡವನಕ್ಕಾಡ್‌ನ‌ಲ್ಲಿರುವ ಸಂಬಂಧಿಕನ ಮನೆಗೂ ತನಿಖಾ ತಂಡ ದಾಳಿ ನಡೆಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next