Advertisement

ತುಮಕೂರು: ಶಂಕಿತ ಉಗ್ರನನ್ನು ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಭಾನುವಾರ  ವಶಕ್ಕೆ ಪಡೆದಿದ್ದಾರೆ.

Advertisement

ವಶಕ್ಕೆ ಪಡೆದ ಶಂಕಿತ ಉಗ್ರ ಮಹಾರಾಷ್ಟ್ರ ಮೂಲದ ಸಾಜಿದ್ ಮಕ್ರಾನಿ‌‌‌ ಎಂದು ತಿಳಿದು ಬಂದಿದೆ. ತಮಕೂರಿನ ಕಾಲೇಜೊಂದರ ವಿದ್ಯಾರ್ಥಿ.

ಐಸಿಸ್  ಜೊತೆ ನಂಟು ಹೊಂದಿದ್ದಾನೆ ಎಂಬ ಶಂಕೆ ಮೇಲೆ ತುಮಕೂರಿನಲ್ಲಿ ಸಾಜಿದ್ ನನ್ನು ಎನ್ ಐ ಎ ತಂಡ ವಶಕ್ಕೆ ಪಡೆದಿದೆ. ಈತ ಸದಾಶಿವ ನಗರದ 9ನೇ ತಿರುವಿನಲ್ಲಿರುವ ಬಾಡಿಗೆ ಮನೆಯೊಂದರಲ್ಲಿ ವಾಸ ಇದ್ದ. ಒಟ್ಟು ನಾಲ್ಕು ಜನ ಸ್ನೇಹಿತರು ಜೊತೆಯಲ್ಲಿ ಇದ್ದರು.

ಇದನ್ನೂ ಓದಿ: ಸಾಗರ: ಬೇಳೂರಿನಲ್ಲಿ ಆರು ಶತಮಾನಗಳ ಹಿಂದಿನ ದೇವಾಲಯ ಸಮುಚ್ಛಯ ಬೆಳಕಿಗೆ

ಭಾನುವಾರ  ಬೆಳಗಿನ ಜಾವ 4 ಗಂಟೆಗೆ ಬಂದ 20 ಜನ ಎನ್ ಐ ಎ ತಂಡ ಸತತ 6 ಗಂಟೆಗಳ ಕಾಲ ವಿಚಾರಣೆ ಮಾಡಿದೆ. ಆತನ ಬಳಿಯಿದ್ದ ಲ್ಯಾಪ್ ಟಾಪ್, ಮೊಬೈಲ್ ,‌ಎಲೆಕ್ಟ್ರಾನಿಕ್ ವಸ್ತುಗಳನ್ನು ಸೀಜ್ ಮಾಡಿ ವಿಚಾರಣೆಗೆ ಕರೆದುಕೊಂಡು ಹೋಗಿದ್ದಾರೆ.

Advertisement

ಮನೆ ಮಾಲೀಕ ಹೇಳುವಂತೆ, ಸಾಜಿದ್ ಮಕ್ರಾನಿ ಸೇರಿ ಒಟ್ಟು ನಾಲ್ಕು ಜನ ಬಾಡಿಗೆ ಪಡೆದಿದ್ದರು. ಕಳೆದ 6 ತಿಂಗಳಿಂದ ಬಾಡಿಗೆ ಇದ್ದರು. ಅವರ ಪೂರ್ವಾಪರ ನಾವು ತಿಳಿದುಕೊಂಡಿರಲಿಲ್ಲ. ಇಂದು ಬೆಳಗ್ಗೆ 20 ಜನ ಅಧಿಕಾರಿಗಳ ತಂಡ ಬಂದಿತ್ತು. ಬೆಳಗಿನ ಜಾವ 4 ಗಂಟೆಯಿಂದ 10 ಗಂಟೆವರೆಗೆ ವಿಚಾರಣೆ ಮಾಡಿದ್ದಾರೆ ಲ್ಯಾಪ್ ಟಾಪ್, ಪಾಸ್ ಪೋರ್ಟ್ ಎಲ್ಲವನ್ನೂ ಸೀಜ್ ಮಾಡಿದ್ದಾರೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next