Advertisement
ಇಸ್ಲಾಮಿಕ್ ಸ್ಟೇಟ್ನ ಕೇರಳ ಘಟಕದ ಭಾಗ ಎಂದು ಶಂಕಿಸಲಾದ ಉಝೈರ್ ಅಜರ್ ಭಟ್ ನ ಡೌನ್ಟೌನ್ ನಗರದ ಕರ್ಫಾಲಿ ಮೊಹಲ್ಲಾ ಪ್ರದೇಶದಲ್ಲಿರುವ ಮನೆಯ ಮೇಲೆ ದಾಳಿ ಮಾಡಲಾಗಿದೆ ಎಂದು ಎನ್ಐಎ ವಕ್ತಾರರು ತಿಳಿಸಿದ್ದಾರೆ.
Related Articles
Advertisement
ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಿದ್ದಕ್ಕಾಗಿ ಜಮ್ಮು ಮತ್ತು ಕಾಶ್ಮೀರಕ್ಕೆ ವಲಸೆ ಕೈಗೊಳ್ಳುವ ಯೋಜನೆಯನ್ನೂ ಅವರು ಮಾಡಿದ್ದಾರೆ ಮತ್ತು ಈ ಪ್ರವಾಸಕ್ಕಾಗಿ ವಿವಿಧ ಮೂಲಗಳಿಂದ ಹಣವನ್ನು ಸಂಗ್ರಹಿಸಿದ್ದಾರೆ ಎಂದು ಎನ್ಐಎ ಹೇಳಿದೆ.
”ತನಿಖೆಯ ವೇಳೆ, ಅಮೀನ್ ಕೇರಳದ ದೀಪ್ತಿ ಮಾರ್ಲಾ ಎಂಬಾಕೆಯೊಂದಿಗೆ ಸಂಪರ್ಕದಲ್ಲಿದ್ದು, ಮತಾಂತರಗೊಂಡ ಮುಸ್ಲಿಂ, ಮಂಗಳೂರಿನ ಅನಸ್ ಅಬ್ದುಲ್ ರಹಿಮಾನ್ ಎಂಬಾತನನ್ನು ಮದುವೆಯಾಗಿರುವುದು ಪತ್ತೆಯಾಗಿತ್ತು. 2015 ರಲ್ಲಿ, ಅವರು ಅಧ್ಯಯನವನ್ನು ಮುಂದುವರಿಸಲು ದುಬೈಗೆ ಹೋಗಿದ್ದರು, ಅಲ್ಲಿ ಅವರು ಮಿಜಾ ಸಿದ್ದೀಕ್ ಅವರನ್ನು ಭೇಟಿಯಾದರು ಮತ್ತು ಇಬ್ಬರೂ ಮಹಿಳೆಯರು ಐಸಿಸ್ ಕಡೆಗೆ ಒಲವನ್ನು ಬೆಳೆಸಿಕೊಂಡರು ”ಎಂದು ವಕ್ತಾರರು ಹೇಳಿದ್ದಾರೆ.