Advertisement

ಅಲ್-ಖೈದಾ ನಂಟು ; ಬೆಂಗಳೂರಿನಲ್ಲಿ ಇಬ್ಬರನ್ನು ಬಂಧಿಸಿದ ಎನ್ ಐಎ

07:43 PM Feb 12, 2023 | Team Udayavani |

ಬೆಂಗಳೂರು : ಬೆಂಗಳೂರು ಮತ್ತು ಥಾಣೆಯಲ್ಲಿ ಶನಿವಾರ ನಡೆಸಿದ ಶೋಧದ ನಂತರ, ಇಂದು ಭಾನುವಾರ ಇಬ್ಬರು ಆರೋಪಿಗಳನ್ನು ಯುವಕರನ್ನು ಎನ್ ಐಎ ಬಂಧಿಸಿದೆ.

Advertisement

ಹಿಂಸಾಚಾರ ಮತ್ತು ಭಯೋತ್ಪಾದನೆಯ ಕೃತ್ಯಗಳಲ್ಲಿ ತೊಡಗಿಸಿಕೊಳ್ಳಲು ಪ್ರಚೋದಿಸಲು ಭಾರತ ಮತ್ತು ವಿದೇಶಗಳಲ್ಲಿ ನೆಲೆಸಿರುವ ಭಯೋತ್ಪಾದಕ ಸಂಘಟನೆಗಳ ಪಿತೂರಿಗೆ ಸಂಬಂಧಿಸಿ ಬಂಧಿಸಲಾಗಿದೆ.

ಬಂಧಿತ ಆರೋಪಿಗಳು ಮಂಜುನಾಥ ಲೇಔಟ್, ಥಣಿಸಂದ್ರ ಮುಖ್ಯ ರಸ್ತೆಯ ಮೊಹಮ್ಮದ್ ಆರಿಫ್ ಮತ್ತು ಥಾಣೆ, ಮಹಾರಾಷ್ಟ್ರದ ಹಮ್ರಾಜ್ ವಾರ್ಷಿದ್ ಶೇಖ್ ಎನ್ನುವವರಾಗಿದ್ದಾರೆ.

ಆರೋಪಿಗಳಾದ ಮೊಹಮ್ಮದ್ ಆರಿಫ್ ಮತ್ತು ಹಮ್ರಾಜ್ ವಾರ್ಷಿದ್, ನಿಷೇಧಿತ ಭಯೋತ್ಪಾದಕ ಸಂಘಟನೆಗಳಿಗೆ ಸಂಬಂಧಿಸಿದ ವಿದೇಶಿ ಮೂಲದ ಆನ್‌ಲೈನ್ ಹ್ಯಾಂಡ್ಲರ್‌ಗಳೊಂದಿಗೆ ಸಂಪರ್ಕದಲ್ಲಿದ್ದರು ಎಂದು ಪ್ರಾಥಮಿಕ ತನಿಖೆಗಳು ಬಹಿರಂಗಪಡಿಸಿವೆ. ಅವರು ತಮ್ಮ ಭಯೋತ್ಪಾದಕ ಚಟುವಟಿಕೆಗಳನ್ನು ಮುಂದುವರಿಸಲು ಅಫ್ಘಾನಿಸ್ಥಾನಕ್ಕೆ ತೆರಳಲು ವಿಸ್ತಾರವಾದ ಯೋಜನೆಗಳನ್ನು ಸಹ ಮಾಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next