Advertisement

Next 5 years ಭ್ರಷ್ಟರಿಗೆ ತಕ್ಕ ಶಾಸ್ತಿ, ನನ್ನ ಬಳಿ ಸ್ವಂತ ಮನೆ ಯೂ ಇಲ್ಲ: ಮೋದಿ

01:54 AM May 05, 2024 | Team Udayavani |

ಸಿಸಾಯಿ/ಪಲಮು: ಎನ್‌ಡಿಎ ಸರಕಾರ ಭ್ರಷ್ಟರ ನಿಜ ಬಣ್ಣವನ್ನು ಬಯಲು ಮಾಡಿದೆ. ಮುಂದಿನ 5 ವರ್ಷ ಗಳಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿರುವ ಎಲ್ಲರಿಗೂ ಕಾನೂ ನಿನ ಪ್ರಕಾರ ತಕ್ಕ ಶಾಸ್ತಿ ಮಾಡಲಾಗುವುದು ಎಂದು ಮೋದಿ ಎಚ್ಚರಿಕೆ ನೀಡಿದ್ದಾರೆ. ಝಾರ್ಖಂಡ್‌ನ‌ ಪಲಮು ಮತ್ತು ಸಿಸಾಯ್‌ನಲ್ಲಿ ಚುನಾವಣ ರ್ಯಾಲಿ ಗಳಲ್ಲಿ ಮಾತನಾಡಿದ ಪ್ರಧಾನಿ, ಜೈಲಲ್ಲಿರುವ ಝಾರ್ಖಂಡ್‌ ಮಾಜಿ ಸಿಎಂ ಹೇಮಂತ್‌ ಸೊರೇನ್‌ ಹೆಸರೆತ್ತದೇ ಪರೋಕ್ಷವಾಗಿ ಅವರನ್ನು ಉಲ್ಲೇಖೀಸಿದ ಮೋದಿ, “ಭ್ರಷ್ಟಾಚಾರದಲ್ಲಿ ಮುಳುಗಿರುವ ಇಂಡಿಯಾ ಒಕ್ಕೂಟವು ಜೈಲಲ್ಲಿರುವ ಭ್ರಷ್ಟರನ್ನು ಬೆಂಬಲಿಸಿ ರ್ಯಾಲಿ ನಡೆಸುತ್ತದೆ. ಇದು ಅವರ ನೈಜ ಮುಖವನ್ನು ಬಯಲು ಮಾಡಿದೆ’ ಎಂದಿದ್ದಾರೆ.

Advertisement

“ಕಾಂಗ್ರೆಸ್‌ನವರು ಹೇಡಿಗಳು. ಭಯೋತ್ಪಾದಕ ದಾಳಿ ನಡೆದಾಗೆಲ್ಲ ಹಿಂದಿನ ಕಾಂಗ್ರೆಸ್‌ ಸರಕಾರ ಜಾಗತಿಕ ವೇದಿಕೆಯಲ್ಲಿ ಹೋಗಿ ಅಳುತ್ತಿತ್ತು. ಆದರೆ ನಮ್ಮ ಸರಕಾರ ಬಂದ ಬಳಿಕ ಪರಿಸ್ಥಿತಿ ಬದಲಾಗಿದೆ. ಈಗ ಪಾಕಿಸ್ಥಾನವೇ ಅಳುತ್ತಾ, ಸಹಾ ಯಕ್ಕಾಗಿ ಬೊಬ್ಬಿರಿ ಯುತ್ತಿದೆ’ ಎಂದರು. ಕಾಂಗ್ರೆಸ್‌ ಸರಕಾರವು ಶಾಂತಿಯ ನಿರೀಕ್ಷೆಯಲ್ಲಿ ಪಾಕಿಸ್ಥಾನಕ್ಕೆ ಲವ್‌ ಲೆಟರ್‌ ಬರೆಯುತ್ತಿತ್ತು. ಅದಕ್ಕೆ ಬದಲಾಗಿ ನೆರೆರಾಷ್ಟ್ರವು ಮತ್ತಷ್ಟು ಉಗ್ರರನ್ನು ಇಲ್ಲಿಗೆ ಕಳುಹಿಸುತ್ತಿತ್ತು. ಈಗಿ ರುವುದು ನವ ಭಾರತ. ಇಲ್ಲಿ ನಾವು ಉಗ್ರರ ನೆಲಕ್ಕೇ ನುಗ್ಗಿ ಹೊಡೆದು ಬರುತ್ತೇವೆ. ಅದೇ ಕಾರಣಕ್ಕೆ ಪಾಕಿ ಸ್ಥಾನವು “ಶೆಹಜಾದಾ'(ರಾಹುಲ್‌) ಪ್ರಧಾನಿಯಾಗ ಲೆಂದು ಬೇಡುತ್ತಿದೆ’ ಎಂದಿದ್ದಾರೆ.

ಪಟ್ನಾದಲ್ಲೂ ಒಬ್ಬ ಶೆಹಜಾದಾ: ಮೋದಿ
“ದಿಲ್ಲಿಯಲ್ಲಿ ಒಬ್ಬ ಶೆಹಜಾದಾ(ರಾಜಕುಮಾರ) ಇರುವಂತೆ ಪಟ್ನಾದಲ್ಲೂ ಇದ್ದಾರೆ. ದಿಲ್ಲಿಯ ಶೆಹಜಾದಾ ಇಡೀ ದೇಶವನ್ನೇ ತನ್ನ ಆಸ್ತಿ ಎಂದು ಭಾವಿಸಿದ್ದರೆ, ಪಟ್ನಾದ ರಾಜಕುಮಾರ ಇಡೀ ಬಿಹಾರವೇ ತನ್ನ “ಆಸ್ತಿ’ ಎಂದು ಭಾವಿಸಿದ್ದಾರೆ’ ಎಂದು ಮೋದಿ ಟೀಕಿಸಿದ್ದಾರೆ.

“ಮನೆ, ಸೈಕಲ್‌ ಕೂಡ ಇಲ್ಲ’
25 ವರ್ಷಗಳಲ್ಲಿ ನನ್ನ ಮೇಲೆ ಭ್ರಷ್ಟಾಚಾರದ ಒಂದೇ ಒಂದು ಕಪ್ಪುಚುಕ್ಕೆಯೂ ಇಲ್ಲ. ನನ್ನ ಬಳಿ ಸ್ವಂತ ಮನೆ ಯೂ ಇಲ್ಲ, ಒಂದು ಸೈಕಲ್‌ ಕೂಡ ಇಲ್ಲ. ಆದರೆ ಕಾಂಗ್ರೆಸ್‌ ಮತ್ತು ಜೆಎಂಎಂ ನಾಯಕರು ತಮ್ಮ ಮಕ್ಕ ಳಿಗಾಗಿ ಪ್ರಮಾಣದ ಆಸ್ತಿಪಾಸ್ತಿಗಳನ್ನು ಮಾಡಿ ಟ್ಟು ಕೊಂಡಿದ್ದಾರೆ ಎಂದ ಮೋದಿ ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next