Advertisement
ಕಿವೀಸ್ನ ಈ ದಿಢೀರ್ ನಡೆ ಜಾಗತಿಕ ಕ್ರಿಕೆಟ್ನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಭದ್ರತಾ ಭೀತಿ ಇರುವುದರಿಂದ ಈ ನಿರ್ಧಾರಕ್ಕೆ ಬಂದಿರುವುದಾಗಿ ನ್ಯೂಜಿಲ್ಯಾಂಡ್ ಕ್ರಿಕೆಟ್ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡೇವಿಡ್ ವೈಟ್ ಹೇಳಿದ್ದಾರೆ.
“ಪಾಕಿಸ್ಥಾನ ಕ್ರಿಕೆಟ್ ಮಂಡಳಿಗೆ ನಮ್ಮ ನಿರ್ಧಾರದಿಂದ ಎಷ್ಟರ ಮಟ್ಟಿಗೆ ಆಘಾತ ವಾಗಲಿದೆ ಎನ್ನುವ ಅರಿವು ನಮಗಿದೆ. ಅವರ ಆತಿಥ್ಯದಲ್ಲಿ ನಮಗೆ ಯಾವ ಕೊರತೆಯೂ ಕಂಡಿಲ್ಲ. ಆದರೆ ಆಟಗಾರರ ಸುರಕ್ಷತೆಗೆ ಮೊದಲ ಆದ್ಯತೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಇದೊಂದೇ ಜವಾಬ್ದಾರಿಯುತ ಆಯ್ಕೆ. ಇಲ್ಲಿಯ ವರೆಗೆ ಆಟಗಾರರಿಗೆ ಯಾವುದೇ ಸಮಸ್ಯೆಯಾಗಿಲ್ಲ, ಎಲ್ಲರೂ ಸುರಕ್ಷಿತವಾಗಿಯೇ ಇದ್ದಾರೆ’ ಎಂದು ಡೇವಿಡ್ ವೈಟ್ ಹೇಳಿದ್ದಾರೆ.
Related Articles
Advertisement
ಪಾಕಿಸ್ಥಾನ-ನ್ಯೂಜಿಲ್ಯಾಂಡ್ 3ಏಕದಿನ, 5 ಟಿ20 ಪಂದ್ಯಗಳ ಸರಣಿಯಲ್ಲಿ ಪಾಲ್ಗೊಳ್ಳಬೇಕಿತ್ತು.
ರಮೀಜ್ ಆಕ್ರೋಶನ್ಯೂಜಿಲ್ಯಾಂಡಿನ ದಿಢೀರ್ ನಿರ್ಧಾರದಿಂದ ದೊಡ್ಡ ಹಿನ್ನಡೆಯಾದದ್ದು ಪಿಸಿಬಿ ಅಧ್ಯಕ್ಷ ರಮೀಜ್ ರಾಜ ಅವರಿಗೆ. ಮೊನ್ನೆಯಷ್ಟೇ ಅಧಿಕಾರ ಸ್ವೀಕರಿಸಿದ ಅವರಿಗೆ ಈ ಸರಣಿ ದೊಡ್ಡ ಪ್ರತಿಷ್ಠೆಯದ್ದಾಗಿತ್ತು. ಆದರೆ ಕಿವೀಸ್ನ ಈ ಅಚ್ಚರಿಯ ನಡೆಯಿಂದ ಅವರು ತೀವ್ರ ಆಕ್ರೋಶಗೊಂಡಿದ್ದಾರೆ. “ಈ ನ್ಯೂಜಿಲ್ಯಾಂಡಿಗರು ಯಾವ ಜಗತ್ತಿನಲ್ಲಿ ವಾಸಿಸುತ್ತಿದ್ದಾರೆ? ಇಲ್ಲಿ ಭೀತಿಪಡುವಂಥದ್ದೇನಿದೆ?’ ಎಂದು ಪ್ರಶ್ನಿಸಿದ್ದಾರೆ.